ರಾಜ್ಯದ ವಿವಿದ ಸಂಘಟಕರು ಆಮ್ ಆದ್ಮಿ ಪಾರ್ಟಿಗೆ ಸೇರುಪಡೆ.

Spread the love

ರಾಜ್ಯದ ವಿವಿದ ಸಂಘಟಕರು ಆಮ್ ಆದ್ಮಿ ಪಾರ್ಟಿಗೆ ಸೇರುಪಡೆ.

ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಕೆ ಆರ್ ಕುಮಾರ್ ಅವರು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚನ್ನಬಸವ ಜೆಕಿನ್ ಇವರನ್ನು ಉತ್ತರ ಕರ್ನಾಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರಿಂದ ಚನ್ನಬಸವ ಜೆಕಿನ್ ಇವರನ್ನು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಅವರು ಕನ್ನಡದ ಕೆಲಸವನ್ನು ಮಾಡುತ್ತಾ ಉತ್ತರ ಕರ್ನಾಟಕದ ಅಧ್ಯಕ್ಷರಾಗಿ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜೆ ಹೊಲ ಮಾತನಾಡುತ್ತಾ ಕನ್ನಡ ಸೇನೆ ಸಂಘಟನೆಯ ರಾಜ್ಯದ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸಿದರು ಮತ್ತು ಚನ್ನ ಬಸವ ಜೇಕಿನ ಅವರಿಗೆ ಶುಭ ಹಾರೈಸಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಸವರಾಜ್ ಮೇಗಿನಮನಿ ಮಾತನಾಡಿ ಕನ್ನಡಪರ ಕೆಲಸಕ್ಕೆ ತಾವು ಸಿದ್ದರಾಗಿರುವುದಾಗಿ ತಿಳಿಸಿದರು, ಮಾಧ್ಯಮ ಪ್ರತಿನಿಧಿ ರಾಘವೇಂದ್ರ ಸಿದ್ದಿಕೇರಿ ಮಾತನಾಡಿ ವಿಕಲಾಂಗರಿಗೂ ಕನ್ನಡ ಸೇನೆಯಲ್ಲಿ ಅವಕಾಶ ನೀಡುವಂತಾಗಲಿ ಮತ್ತು ತಾನು ಸಹ ಕನ್ನಡದ ಕೆಲಸ ಮಾಡಲು ಸಿದ್ಧ ಎಂದು ತಿಳಿಸಿದರು. ಕನಕಗಿರಿ ತಾಲೂಕ ಅಧ್ಯಕ್ಷರಾದ ರಮೇಶ್ ಕೋಟೆ ಮಾತನಾಡಿ ಕನ್ನಡದ ಸೇವೆ ಮಾಡಲು ಸಿದ್ದರಾಗಿರುವ ಜೇಕಿನ್ ರವರು ನಿರಂತರ ಕನ್ನಡ ಸೇವೆ ಮಾಡಲಿ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಸನ್ಮಾನಿತ ಚೆನ್ನಬಸವ ಜೆಕೆನವರು ಆಮ್ ಆದ್ಮಿ ಪಕ್ಷದ ಸದಸ್ಯರೆಲ್ಲರೂ ನನ್ನನ್ನು ಪ್ರೀತಿ ಅಭಿಮಾನ ಪೂರ್ವಕವಾಗಿ  ಸನ್ಮಾನ ಮಾಡಿದ್ದಕ್ಕಾಗಿ ನನಗೆ ಹೃದಯ ತುಂಬಿ ಬಂತು. ನಾನು ಆಮ್ ಆದ್ಮಿ ಪಕ್ಷದ ಸಹೋದರರ ಸ್ನೇಹಕ್ಕೆ ಚಿರಋಣಿ. ಎಂದರು. ಈ ಸಂದರ್ಭದಲ್ಲಿ   ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಬಸವರಾಜ್ , ಬಸ್ಸಮ್ಮ ವಿರೂಪಣ್ಣ ಇತರರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯಾ

 

Leave a Reply

Your email address will not be published. Required fields are marked *