ಮಾಗಡಿ ತಾಲೂಕಿನ ಮಾಡಬಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜೇನುಕಲ್ಲು ಪಾಳ್ಯದ ಇರುಳಿಗರ ಕಾಲೋನಿಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ.

Spread the love

ಮಾಗಡಿ ತಾಲೂಕಿನ ಮಾಡಬಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜೇನುಕಲ್ಲು ಪಾಳ್ಯದ ಇರುಳಿಗರ ಕಾಲೋನಿಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ.

ಇಂದು ಮಾಗಡಿ ತಾಲೂಕಿನ ಮಾಡಬಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜೇನುಕಲ್ಲು ಪಾಳ್ಯದ ಇರುಳಿಗರ ಕಾಲೋನಿಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿ ಆಶ್ರಯದಲ್ಲಿ, ಭರವಸೆ ತಂಡದ ಸಹಕಾರದೊಂದಿಗೆ ರಂಗ ದೊರೆ ಆಸ್ಪತ್ರೆ ಬೆಂಗಳೂರು ಇವರ ಜೊತೆ ಜೇನುಕಲ್ಲು ಪಾಳ್ಯದ ಎಲ್ಲಾ ಶಾಲಾ ಮಕ್ಕಳಿಗೆ ಹಾಗೂ ಅಲ್ಲಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದೆವು.  ಹಾಗೂ ಜೇನುಕಲ್ಲು ಪಾಳ್ಯದಿಂದ ಬೇರೆ ಕಡೆಗೆ ಓದಲು ತೆರಳುವ ವಿದ್ಯಾರ್ಥಿಗಳು ಸುಮಾರು 3-4 ಕಿಮಿ ನಡೆದುಕೊಂಡು ಹೋಗಬೇಕಿದೆ ಆದರೆ ಅವರಿಗೆ ಅನುಕೂಲ ವಾಗಲಿ ಎಂದು ಮಾಡಬಾಳ್ ಹಾಗೂ ಮಾಗಡಿ ಕಡೆಗೆ ಬರುವ ವಿದ್ಯಾರ್ಥಿಗಳಿಗೆ ಸೈಕಲ್ ಗಳನ್ನು ವಿತರಿಸಲಾಯಿತು. ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿಯ ರಾಜ್ಯಾಧ್ಯಕ್ಷರು  ಮರಳುದೇವನಪುರ ವಿದ್ಯಾರ್ಥಿ ಮಿತ್ರ ರವಿಕಿರಣ್, ಭರವಸೆ ತಂಡದ ಸದಸ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಶಾಲಾ ಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು. ಧನ್ಯವಾದಗಳೊಂದಿಗೆ ಬಡ ಹೋರಾಟಗಾರ ವಿದ್ಯಾರ್ಥಿ ಮಿತ್ರ ರವಿಕಿರಣ್,(ಮರಳುದೇವನಪುರ) ರಾಜ್ಯಾಧ್ಯಕ್ಷರು ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿ (ರಿ).

ವರದಿ – ಸಂಪಾದಕೀಯಾ

 

Leave a Reply

Your email address will not be published. Required fields are marked *