ಗಂಗಾವತಿ ನಗರಸಭಾ ವ್ಯಾಪ್ತಿಯ ಬಸ್ಟ್ಯಾಂಡ್ ಮುಂದೆ ಶುದ್ದ ಕುಡಿಯುವ ನೀರಿನ ಘಟಕದ ಮುಂದೆ ಎಎಪಿ ಪ್ರತಿಭಟನೆ.

Spread the love

ಗಂಗಾವತಿ ನಗರಸಭಾ ವ್ಯಾಪ್ತಿಯ ಬಸ್ಟ್ಯಾಂಡ್ ಮುಂದೆ ಶುದ್ದ ಕುಡಿಯುವ ನೀರಿನ ಘಟಕದ ಮುಂದೆ ಎಎಪಿ ಪ್ರತಿಭಟನೆ.

ಇಂದು ಗಂಗಾವತಿ ನಗರಸಭಾ ವ್ಯಾಪ್ತಿಯಲ್ಲಿ ಬಸ್ಟ್ಯಾಂಡ್ ಮುಂದೆ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾದಾಗಿನಿಂದಲೂ ಕಾರ್ಯನಿರ್ವಹಿಸದೆ ಇರುವ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಸದರಿ ಕುಡಿಯುವ ನೀರಿನ ಘಟಕದ ಮುಂದೆ ಪ್ರತಿಭಟನೆ ನಡೆಸಿ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ, ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜೀಹೊಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಬಸವರಾಜ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಸವರಾಜ್ ಮೇಗಳಮನಿ, ಗ್ರಾಮೀಣ ಘಟಕದ ಕಾರ್ಯದರ್ಶಿ ರಾಘು ಕಡೆ ಬಾಗಿಲು, ಕುಮಾರ್ ಕಡೆ ಬಾಗಿಲು, ಬಸವರಾಜ್ ಆನೆಗುಂದಿ, ಭೋಗೇಶ್ ಆನೆಗುಂದಿ, ರವಿಕುಮಾರ್, ಜಿಲ್ಲಾ ಖಜಾಂಚಿ ದೊಡ್ಡಬಸಪ್ಪ, ಆಟೋ ಘಟಕದ ಪದಾಧಿಕಾರಿ ಚಂದ್ರು ಒಗ್ಗ, ನಗರ ಘಟಕದ ಅಧ್ಯಕ್ಷ ಪರಶುರಾಮ್ ಒಡೆಯರ್, ಕಾರ್ಮಿಕ ಘಟಕ ಅಧ್ಯಕ್ಷ ಚಂದ್ರು ನಿಸರ್ಗ, ಮುತ್ತಣ್ಣ, ವಾಸು ಇತರರು ಭಾಗವಹಿಸಿದ್ದರು.

ವರದಿ – ಸೋಮನಾಥ ವಿ.ಸಂಗನಾಳ

Leave a Reply

Your email address will not be published. Required fields are marked *