ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ..

Spread the love

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ..

ಹಿಂದುಗಳ ಬಸವ ಜಯಂತಿ ಮುಸಲ್ಮಾನರ ರಂಜನ್ ಹಬ್ಬ ಒಂದೆ ದಿನ ಬಂದಿರುವುದು ವಿಶೇಷ ದೇಶದಾದ್ಯಂತ ಇಂದು ಬಸವ ಜಯಂತಿ ಹಾಗೂ ರಂಜನ್ ಹಬ್ಬ  ಒಟ್ಟಿಗೆ ಬಂದಿರುವುದು  ವಿಶೇಷ  ಇಂದು ಬಸವ ಜಯಂತಿ ಹಾಗೂ ರಂಜನ್ ಒಂದೇ ದಿನ ಬಂದಿರುವುದು   ನೋಡಿದರೆ ಗೊತ್ತಾಗುತ್ತದೆ    ಎಲ್ಲರೂ ಸಮಾನರೆ,  ಮುಸ್ಲಿಮರಿಗೆ ಸಿಮಿತವಾಗಿರುವ ರಂಜನ್ ಹಬ್ಬ ಹಾಗೂ ಹಿಂದುಳಿಗೆ ಸಿಮಿತವಾಗಿರುವ ಬಸವ ಜಯಂತಿ ಒಂದೇ ದಿನ ಜೋತೆಯಾಗಿಯೇ ಬಂದಿವೆ ಅಂದ ಮೇಲೆ ಮನುಷ್ಯ ರಾದ ನಾವುಗಳು ಹಬ್ಬ ವನ್ನು ಜೋತೆ ಜೋತೆಯಾಗಿ ಆಚರಣೆಮಾಡುವದರಲ್ಲಿ ತಪ್ಪೇನಿಲ್ಲ

ಹಾಗಾದರೆ ನಾವು ಮಾಡುತ್ತಿರುವದಾದರೂ ಏನು

ತಿಳಿದವರು ಮಾಡುತ್ತಿದ್ದಾರೆ ಜಾತಿ

ಏಕೆಂದರೆ ಅವರಿಗೆ ಗೊತ್ತಿಲ್ಲ ಜಾತಿಯ ನೀತಿ

ಮನುಷ್ಯ ಅಂದುಕೊಂಡಿದ್ದನೆ ಜಾತಿಯೆ ನನ್ನ ಜೀವನದ ಜ್ಯೊತಿ

ಹಾಗಾಗಿ ಅವರ ಅಮಲಿನಲ್ಲಿ ಆಗಿದ್ದಾನೆ ಕೋತಿ

ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ. 12ನೇ ಶತಮಾನದಲ್ಲಿ ಇವರು ಅನುಭವ ಮಂಟಪ (ಅಥವಾ, “ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು ಆ ಕಾರಣಕ್ಕಾಗಿ ಅಂದು ಬಸವಣ್ಣನವರ ಇಡಿ ದೇಶದಲ್ಲಿ ಮೋದಲನೆ ಬಾರಿಗೆ ಒಂದು ಧರ್ಮ ಸ್ಥಾಪನೆ ಮಾಡಿದರು. ಅದು ಏಕ ದೇವೋಪಾಸನೆಯ ಧರ್ಮ. ಅಲ್ಲಿಯವರೆಗೆ ಭಾರತದ ಇತಿಹಾಸದಲ್ಲಿ ಯಾವೊಂದು ಧರ್ಮ ಕೂಡ ಏಕ ದೇವೋಪಾಸನೆಯ ಕುರಿತು ಮಾತನಾಡಲಿಲ್ಲ. ಹಿಂದೂ ಧರ್ಮದಲ್ಲಿ ಅನೇಕ ದೇವಾನುದೇವತೆಗಳು ಇದ್ದಾರೆ , ನಂತರ ಬಂದಂತ ಜೈನ್ ಧರ್ಮದಲ್ಲಿ ತಿರ್ಥಂಕರರೆ,  ದೇವರಾಗುತ್ತಾರೆ ತದನಂತರ ಬಂದ ಭೌಧ್ದ ಧರ್ಮ ಅಜ್ನೆಯವಾಧಿ ಧರ್ಮ ವಾಗಿದೆ. ಅಂದರೆ ದೇವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅದರ ಅರ್ಥ. ಧರ್ಮಗಳನ್ನು ಎರಡು ವಿಭಾಗವಾಗಿ ವಿಂಗಡಿಸಲು ಸಾಧ್ಯವಿದೆ. ಒಂದು ಇವನಾರವ, ಇವನಾರವ ಒಂದು ಕೇಳುವ ‍ಧರ್ಮ. ಇನ್ನೊಂದು ಇವ ನಮ್ಮವ, ಇವ ನಮ್ಮವ ಎಂದು ಹೇಳುವ ಧರ್ಮ.ಜಗತ್ತಿನ ಎಲ್ಲಾ ದೇಶಗಳ ೆಲ್ಲಾ ಜನಾಂಗಗಳನ್ನು ಎಲ್ಲಾ ವರ್ಗಗಳ ಜನರನ್ನು ಸ್ವೀಕರಿಸುವ ಮತ್ತು ಅಪ್ಪಿಕೊಳ್ಳುವ ಧರ್ಮಗಳಾಗಿವೆ. ಇಂಥ “ಇವ ನಮ್ಮವ, ಇವ ನಮ್ಮವ ಎಂದು ಹೇಳುವ ಧರ್ಮದ ಸ್ಥಾಪನೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಇಡೀ ಜಗತ್ತನ್ನು ಒಂದು ಮಾಡಲಿಕ್ಕೆ ಪ್ರಯತ್ನ ಪಟ್ಟವರು.

ರಂಜಾನ್ ಅಥವಾ ರಮದಾನ್ (ಅರೇಬಿಕ್‌ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ. ಕ್ರೆಸೆಂಟ್ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟಿದೆ ಮತ್ತು ರಮದಾನ್ ಸಮಯದಲ್ಲಿ ಸುಂದರವಾಗಿ ಪ್ರಕಾಶಿಸಲ್ಪಟ್ಟಿದೆ.

ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಈ ರಂಜಾನ್ ಹಬ್ಬವು ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ. ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್-ಉಲ್-ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ ‘ಝಕಾತ್’ ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್-ಉಲ್-ಫಿತರ್. ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್-ಉಲ್-ಫಿತರ್ ಸಂದರ್ಭೋಚಿತವಾಗಿ ‘ದಾನ್ಯ’ ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ – ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು). ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು!!!. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ. ಹಾಗಿದ್ದರೆ ಯೋಚಿಸಿ ನೋಡಿ ವಿಶ್ವದ ಎಲ್ಲ ಮುಸ್ಲಿಮ ಈ ದಾನವನ್ನು ನೀಡಿದರೆ ಕನಿಷ್ಟ ಒಂದು ವಾರವಾದರೂ ಹಸಿವಿಲ್ಲದ ವಾರ ವಾಗಿರಬಹುದು!!. “ಜಿಹಾದ್-ಜಿಹಾದ್” ಅನ್ನುವ ನಾಮಧಾರಿ ಮುಸ್ಲಿಮ “ಝಕಾತ್ – ಝಕಾತ್” (ದಾನ) ಅಂದರೆ ಇಂದು ಹಸಿವಿನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು. ಸಾಹೋದರ್ಯ ಭಾವ ತುಂಬಿಸುವ ಈದ್ ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, ಸೃಷ್ಟಿಕರ್ತ ನಮನ್ನು ಕರುಣಿಸಲೀ (ಆಮೀನ್) ಎಂದು ಪ್ರಾರ್ತಿಸುತ್ತೇನೆ. ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೊರ್ಟಲ್ ಬಳಗದವತಿಯಿಂದ ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಮತ್ತು ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *