ಕರ್ನಾಟಕ ನವನಿರ್ಮಾಣ ಸೇನೆವತಿಯಿಂದ ನವಂಬರ 01 ರ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು

Spread the love

ಕರ್ನಾಟಕ ನವನಿರ್ಮಾಣ ಸೇನೆವತಿಯಿಂದ ನವಂಬರ 01 ರ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.

ತಾವರಗೇರಾ ಪಟ್ಟಣದ ಕಾರ್ಗೀಲ್ ನವೋದಯ ಕೋಚಿಂಗ್ ಕ್ಲಾಸ್ ನಲ್ಲಿ ಇಂದು ಅದ್ದೂರಿಯಾಗಿ ಕರ್ನಾಟಕ ನವನಿರ್ಮಾಣ ಸೇನೆವತಿಯಿಂದ ಇಂದು ನವಂಬರ 01 ರ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಅಲ್ಲಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನ ಕನ್ನಡವನ್ನ ಒಂದುಗೂಡಿಸಿ ಅದಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಸುದಿನ ಕರ್ನಾಟಕ ರಾಜ್ಯೋತ್ಸವ ದಿನ: ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನವನ್ನು ಪ್ರತಿವರ್ಷ ನವೆಂಬರ್ 1 ರಂದು‘ರಾಜ್ಯೋತ್ಸವ’ ದಿನವಾಗಿ ಆಚರಿಸಲಾಗುತ್ತದೆ. ಎಂದು ವಿಕ್ರಮ ರಾಯಕರ್ ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷರು ಸ್ಫಷ್ಟವಾಗಿ ವಿವರಣೆ ನೀಡಿದರು. ಜೊತೆಗೆ 1956 ರ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಮೂಲಕ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು.  ಇತಿಹಾಸ: ಭಾರತದ ಸ್ವಾತಂತ್ರ್ಯದ ಸಮಯದಲ್ಲಿ, ದಕ್ಷಿಣ ಭಾರತವನ್ನು ಮೈಸೂರು ರಾಜ ಸಂಸ್ಥಾನ, ಹೈದರಾಬಾದಿನ ನಿಜಾಮರು, ಮದ್ರಾಸ್ (ಈಗ ಚೆನ್ನೈ) ಪ್ರೆಸಿಡೆನ್ಸಿ ಮತ್ತು ಬಾಂಬೆ (ಈಗ ಮುಂಬೈ) ಪ್ರೆಸಿಡೆನ್ಸಿ ಆಳುತ್ತಿದ್ದವು. ಉತ್ತಮ ಆಡಳಿತಕ್ಕಾಗಿ, ಸ್ಥಳೀಯರು ಮಾತನಾಡುವ ಭಾಷೆಯ ಆಧಾರದ ಮೇಲೆ ಪ್ರದೇಶಗಳನ್ನು ಮರು ವ್ಯಾಖ್ಯಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. 1956 ರಲ್ಲಿ, ಮೈಸೂರು ರಾಜ್ಯದ ಗಡಿಗಳನ್ನು ಇತರ ಪಕ್ಕದ ರಾಜ್ಯಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಲು ಮರು ವ್ಯಾಖ್ಯಾನಿಸಲಾಯಿತು. ತೆಲುಗು ಮಾತನಾಡುವ ಪ್ರದೇಶಗಳನ್ನು ಒಳಗೊಂಡ ನೆರೆಹೊರೆಯ ಆಂಧ್ರಪ್ರದೇಶವನ್ನು ಸಹ ಅದೇ ದಿನ ರಚಿಸಲಾಯಿತು. ನವೆಂಬರ್ 1, 1973 ರಂದು ಈ ಹೆಸರನ್ನು ‘ಮೈಸೂರು’ ನಿಂದ ‘ಕರ್ನಾಟಕ’ ಎಂದು ಬದಲಾಯಿಸಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ದಿನ ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ರಾಜ್ಯೋತ್ಸವ ದಿನದಂದು ಕನ್ನಡ ಮತ್ತು ಕರ್ನಾಟಕಕ್ಕೆ ಪ್ರಮುಖ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಕರ್ನಾಟಕ ಸರ್ಕಾರ ಪ್ರಶಸ್ತಿ ನೀಡುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸಲು ಕರ್ನಾಟಕದಾದ್ಯಂತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತವೆ.ಎಂದು ರಾಜಾನಾಯ ಸಮಾಜ ಸೇವಕರು ಹೇಳಿದರು. ಈ ಸಂದರ್ಭದಲ್ಲಿ  ವಿಕ್ರಮ ರಾಯ್ಕರ್ ರವರು ತಮ್ಮ ಪಟ್ಟಣ ಪಂಚಾಯತ ಸೇವೆ ಸಂದರ್ಭದಲ್ಲಿ ಹಲವಾರು ಯೋಜನೆಗಳು ನೆನೆಗುದ್ದಿಗೆ ಬಿದ್ದ ಕಾರ್ಯಗಳನ್ನ ಕಾರ್ಯರೂಪದಲ್ಲಿ ಕಾರ್ಯನಿರ್ವಹಿಸಿದ ಸೇವೆ ಇವರದ್ದು, ಅಂತಹ ಸಮಾಜಿಕ ಸೇವೆಗಳಿಗೆ ಸದಾ ಸಿದ್ದರಿರುವ ಇವರನ್ನು ಇಂದು ಈ ಕಾರ್ಯಕ್ರಮದ ಜೋತೆಗೆ ಸನ್ಮಾನ ಮಾಡಿ ಗೌರವಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ವಿಕ್ರಮ್ ರಾಯ್ಕರ್, ಹೋಬಳಿ ಘಟಕ ಅಧ್ಯಕ್ಷರಾದ ಸಿದ್ದನಗೌಡ ಪುಂಡಗೌಡ್ರು, ರಾಜಾನಾಯಕ, ಯಮನೂರಪ್ಪ ಬಿಳೆಗುಡ್ಡ, ನಗರ ಘಟಕದ ಅಧ್ಯಕ್ಷರು ನಬಿಸಾಬ ನವಲಿ, ರವಿ ಹನುಮನಗೌಡ, ಸಲ್ಲಿಂ, ಕುಮಾರ್, ವೆಂಕಟೇಶ್. ಶರಣು. ವಿಜಯ, ಅನು, ನಿರುಪಾದಿ ಪುಂಡಗೌಡ್ರು, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ – ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *