ಗೋವಾದ ಬಿಚ್ಚೋಲಿಯ೦ನಲ್ಲಿ ನೆಡೆಯುವ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಿಜಿಟಲ್ ಗ್ರಂಥಾಲಯದ ರೂವಾರಿ ಶ್ರೀ ಸತೀಶಕುಮಾರ ಹೊಸಮನಿ ಆಯ್ಕೆ,

Spread the love

ಗೋವಾದ ಬಿಚ್ಚೋಲಿಯ೦ನಲ್ಲಿ ನೆಡೆಯುವ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಿಜಿಟಲ್ ಗ್ರಂಥಾಲಯದ ರೂವಾರಿ ಶ್ರೀ ಸತೀಶಕುಮಾರ ಹೊಸಮನಿ ಆಯ್ಕೆ,

ಗೋವಾದ ಬಿಚ್ಚೋಲಿಯಂ ನ ಹೀರಾಬಾಯಿ ಸಭಾಂಗಣದಲ್ಲಿ ನವೆಂಬರ್13 ರಂದು ನಡೆಯುವ  ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನವನು ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ್ ಸಾವಂತ್ ಅವರು ಉದ್ಘಾಟನೆ ಮಾಡುವರು….ಕೇಂದ್ರ ಸಚಿವ ಶ್ರೀಪಾದ್ ನಾಯಕ ಮತ್ತು ಬಿಜೆಪಿ ಹಿರಿಯ ಮುಖಂಡ ಶ್ರೀ C T ರವಿಯವರು ಕನಾ೯ಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ  ಶ್ರೀ C .ಸೋಮಶೇಖರ್ ಇತರರು  ಉಪಸ್ಥಿತರಿರುವರು.

# ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂ ಜoಟಿಯಾಗಿ  ನವೆಂಬರ್ 13ರಂದು ನೆಡೆಸುವ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಶ್ರೀ ಸತೀಶ್ ಕುಮಾರ್ ಹೊಸಮನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿನ್ನೆ ಗೋವಾದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯ ಚರ್ಚೆಯಲ್ಲಿ ಸಮ್ಮೇಳನದ ಸಂಚಾಲಕರಾದ ಮಹೇಶ್ ಬಾಬು ಸುರುವೇ ಅವರು ಶ್ರೀ ಸತೀಶ್ ಕುಮಾರ್ ಹೊಸಮನಿ ಅವರ ಹೆಸರನ್ನು ಸೂಚಿಸಿದರು ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷರಾದ ವೀರೇಶ್ ರವರು ಅನುಮೋದಿಸಿದರು ಸಭೆಯಲ್ಲಿ ಹಾಜರಿದ್ದ ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಅಂಗೀಕರಿಸಿದರು ಜಂಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಹನುಮಂತಪ್ಪ ರೆಡ್ಡಿ ಶಿರೂರವರು ಕಾರ್ಯಕ್ರಮ ಅದ್ದೂರಿಯಾಗಿ ನಡೆಸಬೇಕೆಂದು ರೂಪವೇಷಗಳನ್ನು ವಿವರಿಸಿ ವಿನಂತಿಸಿದರು ಸಂದರ್ಭದಲ್ಲಿ ಅಖಿಲ ಗೋವಾ ಕನ್ನಡ ಮಹಾಸಂಗದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಶಿರೂರು  ಮತ್ತು ಕರ್ಮಭೂಮಿ ಕನ್ನಡ ಸಂಘದ ಪದಾಧಿಕಾರಿಗಳು ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಪದಾಧಿಕಾರಿಗಳು ಉಪಸ್ಥೀತರಿದ್ದರು. ಎಂದು ಪ್ರಕಟಣೆಯಲ್ಲಿ ಕರ್ನಾಟಕ ಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರಾದ ವೀರೇಶ್ ರವರು ತಿಳಿಸಿದ್ದಾರೆ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *