ಜಿಲ್ಲೆಯ ಎಸ್.ಪಿ.(ವರಿಷ್ಠಾಧಿಕಾರಿ) ಇವರಿಂದ ನಗದು ಪುರಸ್ಕರ ಪಡೆದ ತಾವರಗೇರಾ ಠಾಣೇಯ ಅರಕ್ಷಕರು.

Spread the love

ಜಿಲ್ಲೆಯ ಎಸ್.ಪಿ.ಇವರಿಂದ ನಗದು ಪುರಸ್ಕರ ಪಡೆದ ತಾವರಗೇರಾ ಠಾಣೇಯ ಅರಕ್ಷಕರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಒಂದಲ್ಲಾ ಒಂದು ರೀತಿಯ ವಿಶೇಷ ಸುದ್ದಿಯಲ್ಲಿರುತ್ತೆ ಅಂದರೆ ತಪ್ಪಾಗದು. ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಗೆ ಪಿ.ಎಸ್.ಐ.ಆಗಿ ಆಗಮಿಸಿದ ಗೀತಾಂಜಲಿ ಶಿಂಧೆಯವರು ಅಂದಿನಿಂದ ಹಿಂದಿನವರೆಗೂ ಠಾಣೆಗೆ ಬಲ ಬಂದಂತ್ತಾಗಿದೆ. ಕೇವಲ ಒಂದೆ ವರ್ಷದಲ್ಲಿ ಸಿ.ಎಂ. ಇವರಿಂದ ಚಿನ್ನದ ಪಧಕ ಪಡೇದ ಕೀರ್ತಿ ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ತದನಂತರ ಜಿಲ್ಲೆಯಿಂದ ಮತ್ತೊಂದು ಸಿಹಿ ಸುದ್ದಿಯೊಂದಿಗೆ ನಮ್ಮ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಸಿಬ್ಬಂಧಿಗಳಿಗೆ ಜಿಲ್ಲೆಯ ಎಸ್.ಪಿ.ಇವರಿಂದ ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಜಿಲ್ಲೆಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳ ದಾಖಲಾಗಿರುವ ಬಗ್ಗೆ ಅತೀ ವೇಗದಲ್ಲಿ ಪತ್ತೆ ಹಚ್ಚುವ ಮೂಲಕ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲೆಯ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ. ಶ್ರೀಧರ ರವರು ನಗದು ಬಹುಮಾನ ಘೋಷಣೆ ಮಾಡಿದ್ದು. ಇದರಲ್ಲಿ ವಿಶೇಷವಾಗಿ ನಮ್ಮ ಪಟ್ಟಣದ ಮೂರು ಪೊಲೀಸ್ ಸಿಬ್ಬಂದಿಗಳಳು ನಗದು ಪುರಸ್ಕರ ಪಡೆದಿದ್ದಾರೆ. ಎ.ಎಸ್.ಐ ಅತೀಕ್ ಅಹಮ್ಮದ್, ಬಸವರಾಜ ಇಂಗಳದಾಳ, ಮುಖ್ಯ ಪೇದೆ ಶಿವಪುತ್ರಪ್ಪ ಇವರು ನಗದು ಪಡೆದಿರುವುದು ತಾವರಗೇರಾ ಠಾಣೆಗೆ ಪ್ರಶಂಸನೀಯ ಎಂದು ಮೇಲಾಧಿಕಾರಿಗಳಾದ ಗಂಗವಾತಿಯ ಡಿ.ವಾಯ್.ಎಸ್.ಪಿ.ಆರ್.ಎಸ್. ಉಜ್ಜನಕೊಪ್ಪ, ಹಾಗೂ ಕುಷ್ಟಗಿಯ ಸಿ.ಪಿ.ಐ. ನಿಂಗಪ್ಪ.ಆರ್. ಸ್ಥಳೀಯ ಠಾಣಾಧಿಕಾರಿಯಾದ ಗೀತಾಂಜಲಿ ಶಿಂಧೆಯವರು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಚ್ಚುಗಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಯಾವುದೇ ಅಧಿಕಾರಿ ಆಗಲಿ ಕರ್ತವ್ಯಕ್ಕೆ ತಲೆ ಭಾಗಿ, ಸರಕಾರಿ ಕೆಲಸ, ದೇವರ ಕೆಲಸವೆಂದು ನಿಷ್ಠೇಯಿಂದ, ಯಾವುದೇ ಆಮೀಷಕ್ಕೆ ಒಳಗಾಗದೇ ಈ ಜಿಲ್ಲೆಗೆ ಹೆಸರು ತರುವಂತ ಅಧಿಕಾರಿಗಳು ನಮ್ಮ ಜಿಲ್ಲಿಗೆ ಮುತ್ತು ರತ್ನಗಳು ಇದಂತ್ತೆ, ಏನೆ ಇರಲಿ ಒಟ್ಟಿನಲ್ಲಿ ನಮ್ಮ ಪಟ್ಟಣದ ಪ್ರತಿಯೊಬ್ಬ ಅಧಿಕಾರಿಗಳು ಕೇವಲ ಜಿಲ್ಲೆಗೆ ಸಿಮೀತವಾಗಬಾರದು ಇಡೀ ರಾಜ್ಯವೇ ನಮ್ಮ ಪಟ್ಟಣದತ್ತ ಮುಖ ಮಾಡಿ ಗೌರವದಿಂದ ಹೇಳಬೇಕು ಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಗೆ ಅವಶ್ಯವೆಂದು,  ಆ ದಿನಗಳಿಗಾಗಿ (ಸಂತೋಷದ) ಕಾಯುತ್ತಿರುವ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ವೆಬ್ ಪ್ರೋರ್ಟಲ್ ಬಳಗ.

  ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *