ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ತಾವರಗೇರಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ರವಿ ಡಿ. ಚೆನ್ನಣ್ಣನವರ್ ಐ.ಪಿ.ಎಸ್ ಅಧಿಕಾರಿಯವರಿಗೆ ಅದ್ದೂರಿ ಸ್ವಾಗತ..

Spread the love

ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ತಾವರಗೇರಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ರವಿ ಡಿ. ಚೆನ್ನಣ್ಣನವರ್ ಐ.ಪಿ.ಎಸ್ ಅಧಿಕಾರಿಯವರಿಗೆ ಅದ್ದೂರಿ ಸ್ವಾಗತ..

ದಿನಾಂಕ 23/05/2022 ರಂದು (ಸೋಮವಾರ) ದಿನದೊಂದು ನಡೆಯುವ ಸುಕ್ಷೇತ್ರ ಅಂಕಲಿಮಠದ ಜಾತ್ರಾ ಮಹೋತ್ಸವಕ್ಕೆ ಆಗಮೀಸಿದ ಶ್ರೀ ರವಿ ಡಿ. ಚೆನ್ನಣ್ಣನವರ್ ಐ.ಪಿ.ಎಸ್. ಸಿಐಡಿ ಪೋಲಿಸ್ ಅಧೀಕ್ಷಕರನ್ನ ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ತಾವರಗೇರಾ ಪ್ರವಾಸಿ ಮಂಧಿರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ. ಮದ್ಯಾಹ್ನದ ಸಿಹಿ ಭೋಜನದೊಂದಿಗೆ ಸ್ವೀಕರಿಸಿ, ಇವರ ಅಭಿಮಾನಕ್ಕಾಗಿ ಇಂದು ತಾವರಗೇರಾ ಪಟ್ಟಣದ ಹಾಗೂ ಹೋಬಳಿಯ ಜನತೆಯು ಯುವಕರಲ್ಲಿ ಸುದ್ದಿ ಹರಡುತ್ತಲೆ ಯುವಕರ ದಂಡು ಪ್ರವಾಸಿ ಮಂದಿರಕ್ಕೆ ಆಗಮಿಸಿ, ಅಭಿಮಾನಿಗಳ ಜೊತೆಗೆ ಪೋಟೊ ಶೂಟ್ ತೆಗೆಸಿಕೊಂಡು, ಪ್ರಿತಿಯಿಂದ ಅಭಿಮಾನಿಗಳನ್ನು ಅಪ್ಪಿಕೊಂಡರು, ಯುವಕರ ಅಭಿಮಾನಕ್ಕೆ ಅಭಿಮಾನದಿಂದ ಭರಮಾಡಿಕೊಂಡರು, ಪ್ರವಾಸಿ ಮಂದಿರದಲ್ಲಿ ಈ ಕಾರ್ಯದಲ್ಲಿ ಪಟ್ಟಣ ಪಂಚಾಯತಿಯ ಮಾಜಿ ಸದಸ್ಯರಾರದ ಬಸವರಾಜ ಇಳಿಗೇರ್. ಹಾಗೂ ಪಟ್ಟಣದ ಪೋಲಿಸ್ ಸಿಬ್ಬಂದಿಯವರು ಪಾಲುಗೊಂಡಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷರಾದ ಆರ್.ಶರಣಪ್ಪ.ಗುಮಗೇರಾ ಹಾಗೂ ಪಟ್ಟಣದ ಸದಸ್ಯರು ಪಾಲುಗೊಂಡಿದ್ದರು.

 ಸೋಮವಾರ ದಿನಾಂಕ 23/5/2022 ರಂದು ನಡೆಯಲಿರುವ ಶ್ರೀ ಅಂಕಲಿಮಠದ ಶ್ರೀ ನಿರುಪಾದೀಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ  ಇಂದು ಸಂಜೆ 5 ಘಂಟೆ ಸುಮಾರಿಗೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಸದ್ಗುರು ನಿರುಪಾದೀಶ್ವರ ಮಠದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿರುಪಾದೀಶ್ವರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಈ ಕಾರ್ಯಕ್ರಮಕ್ಕೆ ಇಂದು ಸಾಯಂಕಾಲ 5 ರಿಂದ 6 ಘಂಟೆ ವರೆಗೆ ಜರುಗುವ ಸಂಗೀತ ಕಾರ್ಯಕ್ರಮ ಹಾಗೂ ಶ್ರೀ ಮಠದ ಪೂಜ್ಯರ ತುಲಭಾರ ಕಾರ್ಯಕ್ರಮದ ಜೋತೆಗೆ ಬೆಂಗಳೂರು ಸಿಐಡಿ ವಿಭಾಗದ ಪೋಲಿಸ್ ಅಧಿಕ್ಷಕರಾದ ಶ್ರೀ ರವಿ ಡಿ ಚೆನ್ನಣ್ಣನವರು ಹಾಗೂ ನಾಗಲಿಂಗನಗೌಡ ಪಾಟೀಲ ಜಿಲ್ಲಾ ಸತ್ರ ನ್ಯಾಯಾಧೀಶರು ಇವರಿಗೆ ಶ್ರೀ ಸದ್ಗುರು ನಿರುಪಾದೀಶ್ವರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಶ್ರೀ ಮಠದಿಂದ ತಿಳಿದು ಬಂದಿದ್ದು ಇರುತ್ತದೆ ಸುಕ್ಷೇತ್ರ ಅಂಕಲಿಮಠದ ಜಾತ್ರಾ ಮಹೋತ್ಸವ ಶ್ರೀಮಠದಿಂದ ಕೊಡಮಾಡುವ ಶ್ರೀ ನಿರುಪಾಧಿಶ್ರೀ ಪ್ರಶಸ್ತಿ ಸ್ವೀಕರಿಸಲು ಆಗಮಿಸುತ್ತಿರುವ ಶ್ರೀ ನಾಗಲಿಂಗನಗೌಡ ಎಸ್. ಪಾಟೀಲ ಜಿಲ್ಲಾ ಸತ್ರ ನ್ಯಾಯಾಧೀಶರು ಬೆಂಗಳೂರು ಶ್ರೀ ರವಿ ಡಿ. ಚೆನ್ನಣ್ಣನವರ್ ಐ.ಪಿ.ಎಸ್. ಸಿಐಡಿ ಪೋಲಿಸ್ ಅಧೀಕ್ಷಕರು ಸಿಟಿ ಮತ್ತು ಗ್ರಾಮಾಂತರ ಬೆಂಗಳೂರು, ಶ್ರೀ ಹನುಮಂತ ಮರಳಿ ಪಾರಂಪರಿಕ ವೈದ್ಯರು ವಾಸನ ಶ್ರೀ ಬಸಯ್ಯ ಹಿರೇಮಠ ನಂದಿನಿ ಆರ್ಗಾನಿಕ್ ಫಾರ್ಮ್‌ಹೌಸ್, ಶ್ರೀ ಬಸವರಾಜ ಶಂಕರ ಉಮರಾಣಿ ಮಾನವ ಕಂಪ್ಯೂಟರ್‌ ಇವರಿಗೆ ಹೃದಯ ಪೂರ್ವಕ ಸುಸ್ವಾಗತ ಸ್ವಾಗತಿಸಿ ಶ್ರೀ ನಿರುಪಾಧಿಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ಆಗಮಿಸಿದ ಗಣ್ಯರಿಗೆ ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ಶುಭ ಆರೈಸುತ್ತ, ನಾಡಿನ ಭಕ್ತರು ಶ್ರೀ ಸುಕ್ಷೇತ್ರ ಅಂಕಲಿಮಠದ ಜಾತ್ರೆಗೆ ಬಂದು ಶ್ರೀ ನಿರುಪಾಧಿಶ್ವರರ ಆರ್ಶಿವಾದ ಪಡೆದು ಧನ್ಯರಾಗಬೇಕೆಂದು ಭಕ್ತಾಧಿಗಳಲ್ಲಿ ಕೇಳಿಕೊಳ್ಳುತ್ತ, ಶುಭ  ಕೋರುವವರು ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ,,

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *