ತಿರ್ಥಹಳ್ಳಿ ತಾಲ್ಲೂಕಿನಲ್ಲಿ 2 ನೇ ಸಕ್ಷಮ ದಿವ್ಯಾಂಗ ಮಾಹಿತಿ ಸಂಗ್ರಹಣಾ ಅಭಿಯಾನವನ್ನು ಆಯೋಜಿಸಲಾಯಿತು….

Spread the love

ತಿರ್ಥಹಳ್ಳಿ ತಾಲ್ಲೂಕಿನಲ್ಲಿ 2 ನೇ ಸಕ್ಷಮ ದಿವ್ಯಾಂಗ ಮಾಹಿತಿ ಸಂಗ್ರಹಣಾ ಅಭಿಯಾನವನ್ನು ಆಯೋಜಿಸಲಾಯಿತು….

13/04/2022 ಬುಧವಾರ ಇವತ್ತು ತಾಲ್ಲೂಕು ಆಫೀಸ್ ಪಕ್ಕದಲ್ಲಿ ಇರುವ ಶ್ರೀರಾಮ ಮಂದಿರದ ಸಭಾಂಗಣ ತಿರ್ಥಹಳ್ಳಿ ತಾಲ್ಲೂಕಿನಲ್ಲಿ 2 ನೇ ಸಕ್ಷಮ ದಿವ್ಯಾಂಗ ಮಾಹಿತಿ ಸಂಗ್ರಹಣಾ ಅಭಿಯಾನವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿವಿದ್ದೋದೇಶ ಪುನರ್ವಸತಿ ಕಾರ್ಯಕರ್ತರು , ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು . ಈ ಸಮಾರಂಭದಲ್ಲಿ ಸಕ್ಷಮದ ಪರಿಚಯವನ್ನು ಮಾಡುವುದರ ಜೊತೆಯಲ್ಲಿ ಅವರ ಕುಂದುಕೊರತೆಗಳನ್ನು ಆಲಿಸುವುದರ ಜೊತೆಯಲ್ಲಿ ಅಲ್ಲೇ ಕೆಲ ಸಮಸ್ಯೆಗಳಿಗೆ ಪರಿಹಾರವನ್ನು ಸಹ ಮಾಡಿ . ಈ ಹಿಂದೆ ಸಕ್ಷಮ ಸಂಸ್ಥೆಯು ಮಾಡಿದ ಕೆಲಸ ಕಾರ್ಯಗಳನ್ನು ಹಾಗೂ ಈಗ ಕೈಗೊಂಡಿರುವ ಸೌಲಭ್ಯಗಳ ಕೆಲಸ ಕಾರ್ಯಗಳನ್ನು ವಿಸ್ತರಿಸಲಾಯಿತು.ಮತ್ತು ಭಾರತ ಸರ್ಕಾರದಿಂದ ವಿಶೇಷಚೇತನರಿಗಾಗಿಯೆ ಮಾನ್ಯತೆಯನ್ನು ಪಡೆದಿರುವ 2016 ರ ಆರ್.ಪಿ.ಡಿ ( RPD ) ಆಕ್ಟ್ ಬಗ್ಗೆ ಕೆಲ ವಿಷಯಗಳ ಬಗ್ಗೆ ಮಾಹಿತಿಯ ಜೊತೆಯಲ್ಲಿ ಸಮಾಲೋಚನೆಯನ್ನು ಸಹ ಮಾಡಲಾಯಿತು . ಸಕ್ಷಮ ಭಾರತ್ ಸಮರ್ಥ್ ಭೋರತ್.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *