ಗ್ರಾ ಪಂ ಸದಸ್ಯನ ಕಾಮ ಚೆಲ್ಲಾಟ. ಅಡ್ಡ ಬಂದ ಪ್ರೇಯಸಿಯ ಮಗನ ರಕ್ತದೊಕುಳಿಯಾಟ. ಕೊಲೆಮಾಡಿ ಹೂತಿಟ್ಟ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ..

Spread the love

ಗ್ರಾ ಪಂ ಸದಸ್ಯನ ಕಾಮ ಚೆಲ್ಲಾಟ. ಅಡ್ಡ ಬಂದ ಪ್ರೇಯಸಿಯ ಮಗನ ರಕ್ತದೊಕುಳಿಯಾಟ. ಕೊಲೆಮಾಡಿ ಹೂತಿಟ್ಟ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾ ಪಂ ವ್ಯಾಪ್ತಿಯಲ್ಲಿ ಬರುವ ಸದಸ್ಯನ ಕಾಮ ಚೆಲ್ಲಾಟ. ಅಡ್ಡ ಬಂದ ಪ್ರೇಯಸಿಯ ಮಗನ ರಕ್ತದೊಕುಳಿಯಾಟ. ಕೊಲೆಮಾಡಿ ಹೂತಿಟ್ಟ ಶವ ಪತ್ತೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ 22 ವರ್ಷದ ಪುತ್ರನನ್ನು ಪ್ರಿಯಕರನೊಂದಿಗೆ ಸೇರಿ ತಾಯಿಯೇ ಹತ್ಯೆ ಮಾಡಿ ಹೂತಿಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಮಾರ್ಚ್ 2ರಂದು ಬಂಧಿಸಿದ್ದರು. ತಾವರಗೇರಾ ಹೋಬಳಿಯ ಮ್ಯಾದರಡೊಕ್ಕಿ ಗ್ರಾಮದಲ್ಲಿ ಜನೆವರಿ 16 ರಂದು ನಡೆದ ಘಟನೆ. ಮ್ಯಾದರಡೊಕ್ಕಿ ಗ್ರಾಮದ ಗ್ರಾ ಪಂ ಸದಸ್ಯ ಅಮರಪ್ಪ ಕಂದಗಲ್ ಎನ್ನುವ ವಿಕೃತ ಕಾಮಿ ತನ್ನ ಕಾಮ ಚೆಲ್ಲಾಟಕ್ಕೆ. ಪ್ರೇಯಸಿಯ ಮಗನನ್ನು ಕೊಲೆಮಾಡಿ ಹೂತಿಟ್ಟಿದ್ದ. ಪ್ರಕರಣವನ್ನು ಪೊಲೀಸ್ ಇಲಾಖೆಯವರು ಅತ್ಯಂತ ತಿವ್ರ ಗತಿಯಲ್ಲಿ ಪತ್ತೆ ಹಚ್ಚಿ. ಶವವನ್ನು ಹೊರ ತೆಗೆದು ಪ್ರಕರಣವನ್ನು ಸಾಬೀತು ಪಡಿಸಿದ್ದಾರೆ. ತನ್ನ ಪ್ರಿಯಕರನ  ಸುಖಕ್ಕೋಸ್ಕರ ಒಂಭತ್ತು ತಿಂಗಳ ಹೊತ್ತು ಹೆತ್ತ ತನ್ನ ಮಗನ ಕೊಲೆಗೆ ಕೈ ಜೋಡಿಸಿರುವ  ಘಟನೆ ನೋಡಿದರೆ  ಇದು ತಾಯಿ ಕುಲಕ್ಕೆ ಅವಮಾನವಿಯ ಘಟನೆ ಅಂದರೂ ತಪ್ಪಾಗಲಾರದು.

ಒಂದು ಕಡೆ ಈ ಗ್ರಾಮದ ಗ್ರಾ ಪಂ ಸದಸ್ಯ ಅಮರಪ್ಪ ಕಂದಗಲ್ ಗ್ರಾಮದ ಅಭಿವೃದ್ಧಿಗೆ ಹೊತ್ತು ನಿಡುವದಕ್ಕಿಂಥ ಹಣದ ಬಲ, ರಾಜಕೀಯ ಬಲದಿಂದ ಪರಸ್ತ್ರಿಯರ ಅನೈತಿಕ ಸಂಭಂದಕ್ಕೆ  ಹೊತ್ತು ನಿಡುತ್ತಿದ್ದ ಎಂದು ಗ್ರಾಮದ ಗ್ರಾಮಸ್ಥರು ಆರೋಪಿಸಿದ್ದಾರೆ.

ಆ ಯುವಕ ಬಾಳಿ ಬದುಕಬೇಕಾಗಿರುವ ಚಿಕ್ಕ ವಯಸ್ಸಿನಲ್ಲೇ. ಕಾಮುಕ ಗ್ರಾ ಪಂ ಸದಸ್ಯ ಹಾಗೂ ಹೆತ್ತ ತಾಯಿಯಿಂದಲೆ ಅವನಿಗೆ ಮೃತ್ಯು ಬಂದಿರುವುದು  ಆ ಯುವಕನ ದುರ್ದೈವ.  ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹೂತಿಟ್ಟ ಶವವನ್ನು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟರ್​ ಸಮ್ಮುಖದಲ್ಲಿ ಹೊರತೆಗೆದು ಫೊರೆನ್ಸಿಕ್ ಲ್ಯಾಬ್​ಗೆ ಕಳುಹಿಸಲಾಗಿದೆ. ಈ  ಘಟನೆ ಸ್ಥಳಕ್ಕೆ. ಸಹಾಯಕ ಆಯುಕ್ತರಾದ ಬಸಪ್ಪ ಕಲ್ಲ ಶೆಟ್ಟಿ. ತಹಶೀಲ್ದಾರರಾದ ಎಂ ಸಿದ್ದೇಶ. DYSP ಆರ್ ಎಸ್ ಉಜ್ಜನಕೊಪ್ಪ. ಸಿಪಿಐ ಆರ್ ನಿಂಗಪ್ಪ. ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಆರೋಗ್ಯ ಅಧಿಕಾರಿ ಮುಖೇಶ ಚವ್ಹಾಣ ,ಕಂದಾಯ ಅಧಿಕಾರಿಗಳು. ಜುಮಲಾಪೂರ ಗ್ರಾ ಪಂ ಸಿಬ್ಬಂದಿಗಳು ಹಾಗೂ ಪೊಲಿಸ ಸಿಬ್ಬಂದಿಗಳು ಇದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *