ಕುಷ್ಟಗಿ ತಾಲೂಕ ಕ್ಷೇತ್ರದ ಬಗರ ಹುಕಂ ಸಾಗವಳಿ ಸಕ್ರಮೀಕರಣ ಸಮಿತಿಯ ಸದಸ್ಯರಾನ್ನಾಗಿ ಆಯ್ಕೆ ಶ್ರೀ ಲಕ್ಷ್ಮಣ ಮುಖಿಯಾಜಿ ……

Spread the love

ಕುಷ್ಟಗಿ ತಾಲೂಕ ಕ್ಷೇತ್ರದ ಬಗರ ಹುಕಂ ಸಾಗವಳಿ ಸಕ್ರಮೀಕರಣ ಸಮಿತಿಯ ಸದಸ್ಯರಾನ್ನಾಗಿ ಆಯ್ಕೆ ಶ್ರೀ ಲಕ್ಷ್ಮಣ ಮುಖಿಯಾಜಿ……

 

ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಪ್ರಕರಣ 94 ( 1 ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ , ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡತೆ ರಚಿಸಿ ಆದೇಶಿಸಲಾಗಿದೆ . ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್ ಬಯ್ಯಾಪೂರ ಅಧ್ಯಕ್ಷರು ಹಾಗೂ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ವಹಿಸಿದ್ದು , ಶ್ರೀ ಶರಣಪ್ಪ ಗಂಚ್ಯಾಳ ಸಾ.ಮೂಕರ್ತಿನಾಳ ಸದಸ್ಯರು , ಶ್ರೀ ಲಕ್ಷ್ಮಣ ಮುಖಿಯಾಜಿ ಸಾ.ತಾವರಗೇರಾ . ಶ್ರೀಮತಿ ಮಯೂರಿ ರಾಚಪ್ಪ ಮಾಟಲದಿನ್ನಿ ಸ.ಕುಷ್ಟಗಿ , ಸದಸ್ಯ ಕಾರ್ಯದರ್ಶಿಯಾಗಿ ತಹಶೀಲ್ದಾರರು . ಕನಾಟಕ ಸರ್ಕಾರದ ರಾಜ್ಯಪಾಲರ ಆದೇಶನುಸಾರ ಇವರುಗಳನ್ನು ನೇಮಕ ಮಾಡಿದ್ದದು . ತಾವರಗೇರಾ ಪಟ್ಟಣದ ಅಲೆಮಾರಿ ಜನಾಂಗದ ಮುಖಂಡರು , ಹಾಗೂ ಸಮಾಜಸೇವಕರು , ಹಗಲಿರುಳು ಎನ್ನದೆ ಶ್ರಮಿಸುವ ಶ್ರಮಜೀವಿಯಾದ ಶ್ರೀ ಲಕ್ಷ್ಮಣ ಮುಖಿಯಾಜಿ ಇವರನ್ನು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರ ಮೇರಿಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ತಾಲೂಕ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದು , ತಾವರಗೇರಾ ಪಟ್ಟಣದ ನಾಗರಿಕರಿಗೆ ಹಾಗೂ ಅಲೆಮಾರಿ ಸಮಾಜದ ಸಾರ್ವಂಗ ಜನಾಂಗಕ್ಕೆ ಸಂತೋಷದ ವಿಚಾರವಾಗಿದೆ . ತಾವರಗೇರಾ ಪಟ್ಟಣದ ನಾಗರಿಕರು ಹಾಗೂ ಅಲೆಮಾರಿ ಸಮಾಜದ ಬಂದುಗಳು ಹಾಗೂ ತಾವರಗೇರಾ ನ್ಯೂಸ್ ಪತ್ರಿಕೆ & ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿದ ಶುಭ ಹಾರೈಸುತ್ತಿದ್ದೇವೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *