ಕುಷ್ಟಗಿ ತಾಲೂಕ ಕ್ಷೇತ್ರದ ಬಗರ ಹುಕಂ ಸಾಗವಳಿ ಸಕ್ರಮೀಕರಣ ಸಮಿತಿಯ ಸದಸ್ಯರಾನ್ನಾಗಿ ಆಯ್ಕೆ ಶ್ರೀ ಲಕ್ಷ್ಮಣ ಮುಖಿಯಾಜಿ……
ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಪ್ರಕರಣ 94 ( 1 ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ , ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡತೆ ರಚಿಸಿ ಆದೇಶಿಸಲಾಗಿದೆ . ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್ ಬಯ್ಯಾಪೂರ ಅಧ್ಯಕ್ಷರು ಹಾಗೂ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ವಹಿಸಿದ್ದು , ಶ್ರೀ ಶರಣಪ್ಪ ಗಂಚ್ಯಾಳ ಸಾ.ಮೂಕರ್ತಿನಾಳ ಸದಸ್ಯರು , ಶ್ರೀ ಲಕ್ಷ್ಮಣ ಮುಖಿಯಾಜಿ ಸಾ.ತಾವರಗೇರಾ . ಶ್ರೀಮತಿ ಮಯೂರಿ ರಾಚಪ್ಪ ಮಾಟಲದಿನ್ನಿ ಸ.ಕುಷ್ಟಗಿ , ಸದಸ್ಯ ಕಾರ್ಯದರ್ಶಿಯಾಗಿ ತಹಶೀಲ್ದಾರರು . ಕನಾಟಕ ಸರ್ಕಾರದ ರಾಜ್ಯಪಾಲರ ಆದೇಶನುಸಾರ ಇವರುಗಳನ್ನು ನೇಮಕ ಮಾಡಿದ್ದದು . ತಾವರಗೇರಾ ಪಟ್ಟಣದ ಅಲೆಮಾರಿ ಜನಾಂಗದ ಮುಖಂಡರು , ಹಾಗೂ ಸಮಾಜಸೇವಕರು , ಹಗಲಿರುಳು ಎನ್ನದೆ ಶ್ರಮಿಸುವ ಶ್ರಮಜೀವಿಯಾದ ಶ್ರೀ ಲಕ್ಷ್ಮಣ ಮುಖಿಯಾಜಿ ಇವರನ್ನು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರ ಮೇರಿಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ತಾಲೂಕ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದು , ತಾವರಗೇರಾ ಪಟ್ಟಣದ ನಾಗರಿಕರಿಗೆ ಹಾಗೂ ಅಲೆಮಾರಿ ಸಮಾಜದ ಸಾರ್ವಂಗ ಜನಾಂಗಕ್ಕೆ ಸಂತೋಷದ ವಿಚಾರವಾಗಿದೆ . ತಾವರಗೇರಾ ಪಟ್ಟಣದ ನಾಗರಿಕರು ಹಾಗೂ ಅಲೆಮಾರಿ ಸಮಾಜದ ಬಂದುಗಳು ಹಾಗೂ ತಾವರಗೇರಾ ನ್ಯೂಸ್ ಪತ್ರಿಕೆ & ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿದ ಶುಭ ಹಾರೈಸುತ್ತಿದ್ದೇವೆ.
ವರದಿ – ಸಂಪಾದಕೀಯ