ಗುಡೇಕೋಟೆ:ನಕಲಿ ಬಂಗಾರ ಮಾರಾಟ: ಆರೋಪಿ ಅಂದರ್…..

Spread the love

ಗುಡೇಕೋಟೆ:ನಕಲಿ ಬಂಗಾರ ಮಾರಾಟ: ಆರೋಪಿ ಅಂದರ್…..

 ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಜರುಗಿದೆ,ವ್ಯಕ್ತಿಯೋರ್ವ ನಕಲಿ ಬಂಗಾರ ಮಾರಾಟಮಾಡುತ್ತಿರುವುದಾಗಿ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಕೂಡ್ಲಿಗಿ ಪಟ್ಟಣದ ಬಾಪೂಜಿನಗರ ವಾಸಿ ವಿಶ್ವಕರ್ಮ ಸಮಾಜದ ನಾಗರಾಜನ ಮಗ, ನಿರಂಜನ ಎಂದು ಗುರುತಿಸಲಾಗಿದೆ.ದೂರುದಾರ ತಾಲೂಕಿನ ಗುಡೇಕೋಟೆ ಗ್ರಾಮದ ಬೋವಿಸಮಾಜದ ಹನುಮಂತಪ್ಪನ ಮಗ ವಿ.ರಾಜ ಎಂಬುವರು, ನೀಡಿದ ದೂರಿನಂತೆ ಗುಡೇಕೋಟೆ ಠಾಣೆಯಲ್ಲಿ ದೂರುದಾಖಲಾಗಿದೆ.ಆರೋಪಿಯು ಗುಡೇಕೋಟೆ ಕೂಡ್ಲಿಗಿ ಮಾರ್ಗಮದ್ಯದಲ್ಲಿ,ದಾರಿ ಹೋಕರಿಗೆ ತನ್ನಲ್ಲಿದ್ದ ನಕಲಿ ಬಂಗಾರ ಮಾರಾಟಮಾಡುವ ದುರುದ್ದೇಶ ಹೊಂದಿದ್ದ ಎನ್ನಲಾಗಿದೆ. ದೂರುದಾರನಿಗೆ ನಕಲಿ ಬಂಗಾರ ಮಾರಿ ಮೋಸ ಮಾಡುವ ದುರುದ್ದೇಶದಿಂದ ಹೊಂಚು ಹಾಕಿದ್ದ,ಎಂಬ ದೂರುದಾರನು ನೀಡಿದ ದೂರಿನ ಮೇರೆ ಆರೋಪಿತನ ವಿರುದ್ಧ ಪ್ರಕಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *