*ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹೊಸಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಸಮೀರ್ ಶೇಕ್ ಆಯ್ಕೆ …..

Spread the love

*ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹೊಸಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಸಮೀರ್ ಶೇಕ್ ಆಯ್ಕೆ …..

ಎಸ್‍ಡಿಪಿಐ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ನಡೆದ ಪಕ್ಷದ ಹೊಸಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಸಲೀಂ ಖಾನ್ ನೂತನ ವಿಧಾನಸಭಾ ಕ್ಷೇತ್ರ ಸಮಿತಿಯ ಘೋಷಣೆ ಮಾಡಿದರು.  ಅಧ್ಯಕ್ಷರು : ಸಮೀರ್ ಶೇಕ್ ಉಪಾಧ್ಯಕ್ಷರು: ಅಬ್ದುಲ್ ಲತೀಫ್   ಕಾರ್ಯದರ್ಶಿ : ಅಬ್ದುಲ್ ಗನಿ  ಜಂಟಿ ಕಾರ್ಯದರ್ಶಿ : ಮೋಹಿನುದ್ದೀನ್ ಖಜಾಂಚಿ : R ಇರ್ಷಾದ್ ಸದಸ್ಯರುಗಳಾಗಿ : ಅಬ್ದುಲ್ ವಾಜಿದ್ ,ಮನ್ಸೂರ್, ಆಯ್ಕೆಯಾಗಿದ್ದಾರೆ. ಸಮಿತಿ ಘೋಷಣೆ ಮಾಡಿ ಮಾತನಾಡಿದ ಸಲೀಂ ಖಾನ್ ಪಕ್ಷವು ಕಳೆದ ಹನ್ನೆರಡು ವರ್ಷಗಳಿಂದ ತಳ ಸಮುದಾಯಗಳಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದು ಸುಮಾರು 300 ರಷ್ಟು ಜನ ಪ್ರತಿನಿಧಿಗಳು ಚುನಾಯಿತರಾಗಿ ಜನರ ಪ್ರತಿನಿಧಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಸಂವಿಧಾನದ ಆಶಯಗಳನ್ನು ಅನುಷ್ಠಾನ ಮಾಡಲು ಯುವ ಜನಾಂಗ ಹೋರಾಟ ಮಾಡಬೇಕು. ರಾಜಕೀಯ ಲಾಭಕ್ಕಾಗಿ  ಜನರನ್ನು ಧರ್ಮ , ಜಾತಿ ಮತ್ತು ಭಾಷೆಯ ಹೆಸರಿನಲ್ಲಿ  ವಿಭಜಿಸುವ  ಕೆಲಸ ಜೋರಾಗಿ ನಡೆಯುತ್ತಿದೆ , ಸಂಘ ಪರಿವಾರದ ಈ ಸಮಾಜ ವಿರೋಧಿ ಸಂಚನ್ನು ಎಲ್ಲರೂ ಒಂದಾಗಿ ಸೋಲಿಸ ಬೇಕಾಗಿದೆ. ಸಂವಿಧಾನ ಸಂರಕ್ಷಣೆ ಮತ್ತು ಅದರ ಆಶಯ ಅನುಷ್ಠಾನಕ್ಕಾಗಿ ಎಸ್ ಡಿ ಪಿ ಐ ನಡೆಸುವ ಎಲ್ಲಾ ಜನಪರ ಹೋರಾಟಗಳಿಗೆ ಜನಸಾಮಾನ್ಯರು ಕೈ ಜೋಡಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸಲೀಂ ಖಾನ್,ಮತ್ತು ಅಕ್ಬರ್ ಅಲಿ, ಜಿಲ್ಲಾಧ್ಯಕ್ಷರಾದ ವಲಿಬಾಷ, ಜಿಲ್ಲಾ ಉಪಾಧ್ಯಕ್ಷರಾದ ನಜೀರ್ ಖಾನ್,ಇರ್ಫಾನ್ ಕಟಗಿ, ಸಲೀಂ ಅಹ್ಮದ್, ಶೋಯಿಬ್ ನಿಯಾಜಿ,ಇಬ್ರಾಹಿಂ, M D ರಫೀಕ್ ಮೊದಲಾದವರು ಉಪಸ್ಥಿತರಿದ್ದರು .

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *