ಜಾನಪದ ಅಕಾಡೆಮಿ ವತಿಯಿಂದ ಸಾಧಕರಿಗೆ ಗೌರವ ಸನ್ಮಾನ.

Spread the love

ಜಾನಪದ ಅಕಾಡೆಮಿ ವತಿಯಿಂದ ಸಾಧಕರಿಗೆ ಗೌರವ ಸನ್ಮಾನ.

ಹುಮನಾಬಾದ : ಜಾನಪದ ಅಕಾಡೆಮಿ ವತಿಯಿಂದ ಕೊಡು ಮಾಡುವ ಪ್ರಶಸ್ತಿಗೆ ಬಾಜನರಾದ ಜಾನಪದ ಕಲಾವಿದ ಸಿದ್ರಾಮ ಗೋಂದಳಿ ಹಾಗೂ ಇತ್ತೀಚೆಗೆ ಕಲಬುರ್ಗಿ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಡಾ.ಗವಿಸಿದ್ಧಪ್ಪಾ ಪಾಟೀಲ ರವರನ್ನು ಪಟ್ಟಣದಲ್ಲಿ ಗೆಳೆಯರ ಬಳಗದ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ರವೀಂದ್ರ ಕುಮಾರ ಭಂಡಾರಿ, ವೀರಂತರೆಡ್ಡಿ ಜಂಪಾ,ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಜ ಮೇತ್ರೆ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಚೆಟ್ಟಿ,ಕರುನಾಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಉಮೇಶ ಬಾಬು ಮಠದ,ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಸವರಾಜ ದಯಾಸಾಗರ, ಧರಿನಾಡು ಕನ್ನಡ ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ,ಡಾಕಪ್ಪ ಮೋತಿಲಾಲ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *