ಲಕ್ಷ್ಮೇಶ್ವರ: ಬೈಕ್ ಕಳ್ಳನ ಬಂಧನ, ಕದ್ದ ಬೈಕ್ ಗಳು ವಶಕ್ಕೆ-

Spread the love

ಲಕ್ಷ್ಮೇಶ್ವರ: ಬೈಕ್ ಕಳ್ಳನ ಬಂಧನ, ಕದ್ದ ಬೈಕ್ ಗಳು ವಶಕ್ಕೆ

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣ,ಇತ್ತೀಚೆಗೆ ಜರುಗಿದ್ದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿಂತೆ. ತ್ವರಿತಗತಿಯಲ್ಲಿ ಪ್ರಕರಣದ ಆರೋಪಿಗಳ ಪತ್ತೆಗೆ,ಜಿಲ್ಲಾ ವರಿಷ್ಠಾದಿಕಾರಿಗಳು ಹಾಗೂ ಡಿವೈಎಸ್ಪಿ ಹಾಗೂ ಸಿಪಿಐ ರವರು ನೀಡಿದ ನಿರ್ಧೇಶನದಂತೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಠಾಣೆಯ ಪಿಎಸ್ಐ ಪ್ರಕಾಶ್.ಡಿ ರವರು ನೇತೃತ್ವದಲ್ಲಿ, ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದರು. ಕಳ್ಳನನ್ನು ಪತ್ತೆ ಹಚ್ಚಿದ್ದು ಐಪಿಸಿ ಕಲಂ 379  ನೇದ್ದರಲ್ಲಿ, ಕಳುವಾದ  ಮೋಟರ್ ಸೈಕಲ್ ಆರೋಪಿತನನ್ನು ಲಕ್ಷ್ಮೇಶ್ವರದ  ಹೊರವಲಯದಲ್ಲಿ ಹಿಡಿದು ವಿಚಾರಿಸಿದ್ದಾರೆ. ಅವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ, ಸದ್ರಿ ಆರೋಪಿತನಾದ ಇಮಾಮಜಾಪರ ಮಹ್ಮದ ಗೌಸ್ ಮುಲ್ಲಾನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿದ್ದಾಗಿ  ಹೇಳಿದ್ದಾನೆಂದು ತಿಳಿದು ಬಂದಿದೆ, ಈತನಿಂದ ಒಟ್ಟು 1.50.000 ₹ ಬೆಲೆಯ ವಿವಿಧ ಕಂಪನಿಯ 4 ಬೈಕುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಪ್ರಕಾಶ್ ಡಿ, ಎಎಸ್ಐ. ಟಿ .ಕೆ .ರಾಠೂಡ, ಜಿ.ಎಂ ಬೂದಿಹಾಳ, ಆರ್ ಎಸ್ ಯರಗಟ್ಟಿ, ಎನ್ ಡಿ ಹುಬ್ಬಳ್ಳಿ, ಆನಂದ್ ಸಿಂಗ್ ದೊಡ್ಡಮನಿ, ಎಮ್ ಡಿ ಲಮಾಣಿ, ಸೇರಿದಂತೆ  ಸಿಬ್ಬಂದಿ ವರ್ಗದವರು  ಇದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008938528

Leave a Reply

Your email address will not be published. Required fields are marked *