ಕೂಡ್ಲಿಗಿಯ ಸಂಗೀತ ಕಲಾವಿದ ಅಗಸಗಟ್ಟೆ(ಎ)ತಿಂದಪ್ಪ ಗೆ “ಕಲಾವಿಭೂಷಣ”-

Spread the love

ಕೂಡ್ಲಿಗಿಯ ಸಂಗೀತ ಕಲಾವಿದ ಅಗಸಗಟ್ಟೆ()ತಿಂದಪ್ಪ ಗೆಕಲಾವಿಭೂಷಣ“-

ವಿಜಯನಗರ  ಜಿಲ್ಲೆ ಕೂಡ್ಲಿಗಿ ಯ ರಂಗ ಕಲಾವಿದರು, ಪ್ರವಚನ ಕಾರರು ಹಾಗೂ ಸಂಗೀತ ಕಲಾವಿದರಾದ ಅಗಸಗಟ್ಟೆ(ಎ)ತಿಂದಪ್ಪ ರಿಗೆ.    ಆಂದ್ರ ಪ್ರದೇಶದ ಅನಂತಪುರದಲ್ಲಿರುವ ಸಂಸ್ಥೆಯೊಂದು,ಶ್ರೇಷ್ಠ ಕಲಾವಿದರಿಗೆ  ನೀಡುವ “ಕಲಾ ವಿಭೂಷಣ” ಪ್ರಶಸ್ತಿ ಲಭಿಸಿದೆ. ಆಂದ್ರ ಪ್ರದೇಶದ ‍ಅನಂತಪುರದ ಶ್ರೀವಗದೇವ ವಾದ್ಯ ಹಾಗೂ, ಸಂಗೀತ ಕಲಾ ಸಾಂಸ್ಕ್ರತಿಕ ಸಂಸ್ಥೆ ವತಿಯಿಂದ.ಕಲಾ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು, ಸಂಸ್ಥೆ ಗುರುತಿಸಿ ಅವರಿಗೆ ಸಂಕ್ರಾತಿ ಸಂಭ್ರದ ಸ್ಮರಣಾರ್ಥ  ಪ್ರಶಸ್ತಿ ನೀಡಿ ಗೌರವಿಸಲಿದೆ. ಕೂಡ್ಲಿಗಿಯ ಸಂಗೀತ ಕಲಾವಿದರಾದ ಅಗಸಗಟ್ಟೆ ತಿಂದಪ್ಪರವರು “ಕಲಾವಿಭೂಷಣ” ರಾಜ್ಯ ಪ್ರಶಸ್ತಿ ಗೆ  ಭಾಜನರಾಗಿದ್ದಾರೆ. ಜ9ರಂದು ಅನಂತಪುರದಲ್ಲಿ ಜರುಗಿದ ಕಾರ್ಯಕ್ರಮದ ವೇದಿಕೆಗೆ ಆಹ್ವಾನಿಸಿ,ಗಣ್ಯಮಾನ್ಯರು ಹಾಗೂ ಸಂಸ್ಥೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಕಲಾವಿದ ತಿಂದಪ್ಪರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ, ಪಂಚಮಸಾಲಿ  ಹಾಗೂ ವೀರಶೈವ ಸಮುದಾಯದ ಸರ್ವ ಸದಸ್ಯರು,ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು, ಹರಪನಹಳ್ಳಿ ತಾಲೂಕಿನ ವಿವಿದ ಸಮುದಾಯಗಳ ಸಂಘಟನೆಗಳ ಪದಾಧಿಕಾರಿಗಳು, ವಿವಿದ ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು ಕಾರ್ಯಕರ್ತರು, ನಾಗರೀಕರು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲೂಕಿನ ಕಲಾವಿದರು ಹಾಗೂ ಸಂಗೀತ ಕಲಾವಿದರು. ಕಲಾವಿದ ಅಗಸಗಟ್ಟೆ ತಿಂದಪ್ಪರನ್ನು ಅಭಿನಂದಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *