ಗೋವಾದಲ್ಲಿ ಪುನೀತ್ ನಮನ…..ಆರುಣ್ಯ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಪ್ರೆಸ್ ಕ್ಕ್ಲಬ್ ಕೌನ್ಸಿಲ್ ಸಹಯೋಗದಲ್ಲಿ….. 

Spread the love

ಗೋವಾದಲ್ಲಿ ಪುನೀತ್ ನಮನ…..ಆರುಣ್ಯ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಪ್ರೆಸ್ ಕ್ಕ್ಲಬ್ ಕೌನ್ಸಿಲ್ ಸಹಯೋಗದಲ್ಲಿ….. 


ಗೋವಾ :  2022 ಹೊಸ ವರುಷದ ಆಚರಣೆಯನ್ನು ಹೊಸ ರೀತಿಯಲ್ಲಿ ಆಚರಿಸುವ ಸದುದ್ದೇಶದಿಂದ ಆರುಣ್ಯ ಸೇವಾ ಟ್ರಸ್ಟ್, ಚಾರ್ಲ್ಸ ಮೇಮೋರಿಯಲ್ ಫೌಂಡೇಶನ್ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ, ಗೋವಾದ ಬೋಗ್ಮಾಲೋ ಬೀಚ್ ರೆಸಾರ್ಟ್ ನಲ್ಲಿ  ಜನಸಾಗರದ ಮಧ್ಯೆ ನಮ್ಮ ಕರುನಾಡಿನ ಯುವರತ್ನ, ಕರ್ನಾಟಕ ರತ್ನ ಪ್ರಶಸ್ತಿ ವಿಜೇತ ನಮ್ಮ-ನಿಮ್ಮೆಲ್ಲರ ಮನದಲಿ ನೆಲೆಸಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಅನಂತ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ಅವರು ಕೊಟ್ಟಂತಹ ಆದರ್ಶಗಳನ್ನು ಇಡೀ ದೇಶಕ್ಕೆ ರವಾನಿಸುವ  ನಿಟ್ಟಿನಲ್ಲಿ  ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ರಾಜ್ಯಗಳಿಂದ  ಆಗಮಿಸಿದ ಜನರ ಮದ್ಯೆ ದೀಪ ಬೆಳಗುವುದರ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಪುನೀತ್  ಮತ್ತೆ ಹುಟ್ಟಿ ಬರಲೆಂದು ಪ್ರಾರ್ಥಿಸಿ,  ಇವರು ಮಾಡಿದ ಸಮಾಜ ಸೇವೆಯನ್ನು ಎಲ್ಲರೂ ಕೂಡ ಪಾಲಿಸಬೇಕು, ಸಮಾಜಕ್ಕೆ, ನಮ್ಮ ನಾಡಿಗೆ ಅವರ ಆದರ್ಶಗಳು  ಜೀವಂತವೆಂಬ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಆರುಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಧನುಶ್ರೀ.ಕೆ,  ಗಾಯತ್ರಿ ಕೆ ದೇಖನೆ,  ಕಾಶಿನಾಥ ದೇಖನೆ , ಜಯಂತಿ. ಕೆ , ಸುಮಾ ಭಾರತಿ ಮತ್ತು ಜಯಮ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *