ಅಲ್ಲಾಪೂರ ಗ್ರಾಮಕ್ಕೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸುಶೀಲಾ ಭೇಟಿ

Spread the love

ಅಲ್ಲಾಪೂರ ಗ್ರಾಮಕ್ಕೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸುಶೀಲಾ ಭೇಟಿ..

ಕುಂದಗೋಳ :  ತಾಲೂಕಿನ ಗುಡೇನಕಟ್ಟಿ ಪಂಚಾಯತ್ ವ್ಯಾಪ್ತಿಯ   ಅಲ್ಲಾಪೂರ, ಗ್ರಾಮಕ್ಕೆ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಭೇಟಿ ನೀಡಿ 15ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಗ್ರಾಮದ ಜಾನುವಾರು ಕುಡಿಯುವ ನೀರು ತೊಟ್ಟಿ ಶುದ್ಧ ಕುಡಿಯುವ ನೀರಿನ ಘಟಕ ಗಟಾರ್ ಕಾಮಗಾರಿ ಪರಿಶೀಲನೆ ನಡೆಸಿದರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಮಕ್ಕಳೊಡನೆ ಮಗುವಾದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಅವರು  ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಮಗ್ಗಿ ಕೇಳಿ ಭವಿಷ್ಯದಲ್ಲಿ ಏನಾಗುತ್ತಿರಿ ಎಂದು ಕೇಳಿ ಲೆಕ್ಕ ಬಿಡಿಸಲು ಸೂಚಿಸಿದರು. ನಂತರ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಶಿಕ್ಷಕರ ಶ್ರಮದ ಫಲವೆಂದು ಅಭಿನಂದಿಸಿದರು ಬಳಿಕ ಅಲ್ಲಾಪೂರ ಗ್ರಾಮದ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ‌ರಡ್ಡೇರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು ಗ್ರಾಮದ ಜನರಿಗೆ ವ್ಯಾಕ್ಸಿನ್ ಪಡೆಯುವಂತೆ ಸಲಹೆ ನೀಡಿ, ಅಲ್ಲಾಪೂರ ಗ್ರಾಮದ ಕೆರೆಗೆ ಸಮಗ್ರ ಅಭಿವೃದ್ಧಿ ಯೋಜನೆ ನೀಡುವ ಭರವಸೆ ನೀಡಿದರು. ಅಂಗನವಾಡಿಯ ಆಟೋಟದ ಪರಿಕರಗಳನ್ನು ನೋಡಿ ಖುಷಿ ಪಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ‌ರಡ್ಡೇರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ, ಪಿಡಿಓ ಬಸವರಾಜ ಕುರಣಿ ಇತರರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *