ತಳಮಟ್ಟದಲ್ಲಿ ಪಕ್ಷದ ಏಳಿಗೆಗೆ  ಶ್ರಮಿಸಿದ ದಿ. ಶ್ರೀ ರವಿ ಹಿರೇಮಠ ಅವರ ಸೇವೆ ಅವಿಸ್ಮರಣೀಯ ……

Spread the love

ತಳಮಟ್ಟದಲ್ಲಿ ಪಕ್ಷದ ಏಳಿಗೆಗೆ  ಶ್ರಮಿಸಿದ ದಿ. ಶ್ರೀ ರವಿ ಹಿರೇಮಠ ಅವರ ಸೇವೆ ಅವಿಸ್ಮರಣೀಯ ……

ಬಿಜೆಪಿ ಬೆಳಗಾವಿ ವಿಭಾಗದ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ದಿವಂಗತ ಶ್ರೀ ರವಿ (ರಾಜಶೇಖರ) ಹಿರೇಮಠ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ನಿಮಿತ್ತ, ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿರುವ ಅವರ ನಿವಾಸಕ್ಕೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ಪಕ್ಷದ ಏಳಿಗೆಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಗರಡಿಯಲ್ಲಿ ಬೆಳೆದ ರವಿ ಅವರು ಶಿಸ್ತು, ಬದ್ಧತೆ, ಸಮಾಜ ಸೇವೆಯ ಗುಣವನ್ನು ಸಹಜವಾಗಿಯೇ ಮೈಗೂಡಿಸಿಕೊಂಡಿದ್ದರು. ಶಾಂತ ಸ್ವಭಾವದವರು ಹಾಗೂ ತೆರೆಯ ಹಿಂದೆ ನಿಂತು ಸಂಘಟನೆಯನ್ನು ಕಟ್ಟಿ, ತಳಮಟ್ಟದಲ್ಲಿ ಪಕ್ಷದ ಪ್ರಗತಿಗೆ ಶ್ರಮಿಸಿದ ಅವರ ನಿಸ್ವಾರ್ಥ ಸೇವೆ ಎಂದೆಂದಿಗೂ ಅಜರಾಮರ. ಬೆಳಗಾವಿಯ ಹಲವು ಗ್ರಾಮಗಳ ಧನಾತ್ಮಕ ಬದಲಾವಣೆಗಳ ಹಿಂದೆ ದಿ. ರವಿ ಹಿರೇಮಠ ಅವರ ಅಚ್ಚಳಿಯದ ಹೆಜ್ಜೆ ಗುರುತುಗಳು ಸದಾ ನೆನಪಿನ ಬುತ್ತಿಯಲ್ಲಿರುತ್ತದೆ ಎಂದು ಹೇಳಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *