ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ವೆಲ್ಫೇರ್ ಪಾಟಿ೯ ಆಗ್ರಹಿಸುತ್ತದೆ…..

Spread the love

ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ವೆಲ್ಫೇರ್ ಪಾಟಿ೯ ಆಗ್ರಹಿಸುತ್ತದೆ…..

( ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ) ಮಾನ್ಯರೇ ತ್ರಿಪೂರದಲ್ಲಿ ಮುಸ್ಲಿಂರ ಮೇಲಿನ ದೌರ್ಜನ್ಯ ಮತ್ತು ಪಾರ್ಥನಾ ಸ್ಥಳಗಳ ದೊಂಸ ಕೆಲ ದಿನಗಳಿಂದ ನಿರಂತರವಾಗಿ  ನಡೆಯುತ್ತಿದ್ದರೂ ಅಲ್ಲಿನ ಸರಕಾರ ಮಾತ್ರ ಯಾವ ಕ್ರಮವೂ ಕೈಗೊಳ್ಳದೆ ಮೌನವಾಗಿರುವದು ನಿಜಕ್ಕೂ ಖಂಡನೀಯ ವಿಷಯವಾಗಿದೆ.ತ್ರಿಪುರದಲ್ಲಿ ನಡೆದಿರುವ ಹಿಂಸಾಚಾರವನ್ನು ತಡೆಯಲು ವಿಫಲರಾಗಿರುವ ಮುಖ್ಯಮಂತ್ರಿಯನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಮತ್ತು ಅಲ್ಲಿನ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು  ಒತ್ತಾಯಿಸುತ್ತೇವೆ. ದೇಶದಲ್ಲಿ  ಇತ್ತಿಚೀನ ದಿನಗಳಲ್ಲಿ ದಲಿತರ ಮುಸ್ಲಿಂರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಕೂಡಲೇ ಇಂತಹ ಕೊಮು ಗಲಭೆ ಎಬ್ಬಿಸುವ ದುಷ್ಟ ಶಕ್ತಿಗಳನ್ನು ಬುಡ ಸಮೇತ ಕಿತ್ತೆಸೆಯಬೇಕು ಈ ನಿಟ್ಟಿನಲಿ  ಮಾನ್ಯ ರಾಷ್ಟ್ರಪತಿಗಳು ಹಸ್ತಕ್ಷೇಪ ಮಾಡಬೇಕು ಎಂದು ವೆಲ್ಫೇರ್ ಪಾಟಿ೯ ಆಗ್ರಹಿಸುತ್ತದೆ ಎಂದು ತಾಲೂಕಿನ ತಹಶೀಲ್ದಾರ್ ಕಾರ್ಯಲಯದ ಸಿರಸ್ತೇಧಾರರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷರು /ತಾಲೂಕ್ ಅಧ್ಯಕ್ಷರು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಲೂಕ ಅಧ್ಯಕ್ಷರಾದ  ಹಸನ್ನೂದ್ದೀನ್, ಮೈಬೂಬುಬ ಸಾಬ, ಅಲ್ತಾಪ್, ಅನ್ಸರ್, ಗೇಸೂದ್ದೀನ್, ಯಮನೂರಪ್ಪ ಬಿಳೆಗುಡ್ಡ ಹಾಗೂ ರಾಜಾನಾಯಕ್, ಇತರರು ಉಪಸ್ಥಿತರಿದ್ದರು. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *