ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ…

Spread the love

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ…

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ ಸೀರತ ಅಭಿಯಾನದ ಅಂಗವಾಗಿ ತಾವರಗೇರಾ ಘಟಕದ ವತಿಯಿಂದ ಸ್ಥಳಿಯ ಮಜ್ಜೀದೆ ಅಕ್ಸಾ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಗೌರವಾನ್ವಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಶ್ರೀಶ್ರೀಷ.ಬ್ರ ೧೦೮ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನೇಶ್ವರ ಮಠ ಕುಷ್ಟಗಿ ಅವರು ಮಾತನಾಡಿ ದೇಶ ಹಾಗು ಸಮಾಜದ ಅಭಿವೃದ್ದಿಯಾಗಬೇಕೆಂದರೆ. ಸಕಲ ಜೀವಾತ್ಮಗಳಿಗೆ ಮಾದರಿಯಾಗಿರುವ ಪ್ರವಾದಿ ಮಹಮ್ಮದ್(ಸ)ರ. ಹಾಗು ಹಲವಾರು ಶರಣರು. ದಾರ್ಶನಿಕ ವ್ಯಕ್ತಿಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೊದಲು ನಮ್ಮ ಮನಸ್ಸುಗಳು ಮತ್ತು ಸುತ್ತಮುತ್ತಲಿನ ವಾತಾವರಣ ಶುದ್ದಿಮಾಡಿಕೊಂಡರೇ ಮಾತ್ರ ಅಭಿವೃದ್ದಿಯಾಗಲು ಸಾಧ್ಯ. ಹಾಗು ಈಗ ಕಾರ್ಯ ನಿರ್ವಹಿಸುತ್ತಿರುವ ಜಮಾತೇ ಇಸ್ಲಾಮೀ ಹಿಂದ್ ಮತ್ತು ಎಲ್ಲಾ ಸಂಘಟನೇಗಳು ಮತಭೇದವನ್ನು ಮರೇತು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಅತ್ಯುತ್ತಮ ಮಾದರಿ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೇವಹಿಸಿದ ಇಲ್ಲಕಲ್ಲ್ ನ ಲಾಲಹುಸೇನ್ ಕಂದಗಲ್ಲ್ ಅವರು ಮಾತನಾಡಿ  ಪ್ರಸ್ತುತ ಸನ್ನಿವೇಶದಲ್ಲಿ ಯುವಕರು ಜೂಜು, ಮದ್ಯಪಾನ, ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿ ತಮ್ಮ ಮೂಲ ಜವಾಬ್ದಾರಿಯನ್ನೇ ಮರೆತಿದ್ದಾರೆ. ಇಂತಹವರನ್ನು ದುಷಚಟ್ಟಗಳಿಂದ ಹೊರ ಬರಲು. ಸರ್ವಧರ್ಮದ ಯುವಕರಿಗೆ ಆದ್ಯಾತ್ಮಕವಾಗಿ ಮನಪರಿರ್ವನೇಯಾಗುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟನೇಯವರು ಹಮ್ಮಿಕೊಳ್ಳಬೇಕೆಂದು ಹೇಳಿದರು.  ಅತಿಥಿಗಳಾಗಿ ಆಗಮಿಸಿದ ಎಸ್.ಎಮ್.ವಿ. ಕಾಲೇಜಿನ ಪ್ರಾಂಶುಪಾಲರಾದ ಲಕ್ಷö್ಮಣಸಿಂಗ್ ವಗರನಾಳ ಅವರು ಮಾತನಾಡಿ ಆರನೇ ಶತಮಾನದಲ್ಲಿ ಜನಿಸಿದ ಪ್ರವಾದಿ ಮಹಮ್ಮದ್(ಸ)ರ ಹದಿಸಗಳು. ಹಾಗು ೧೨ನೇ ಶತಮಾನದಲ್ಲಿ ಜನಿಸಿದ ಬಸವಣ್ಣನವರ ವಚನ ಸಾಹಿತ್ಯ ಮತ್ತು ಇಂತಹ ಮಹಾನ್ ವ್ಯಕ್ತಿಗಳು ಸಮೃದ್ದ ಸಮಾಜ ನಿರ್ಮಿಸಲು ತಮ್ಮ ಜೀವಮಾನದ್ದುದಕ್ಕೂ ಶ್ರಮಿಸಿ ಸಮಾಜದಲ್ಲಿನ ಎಲ್ಲಾ ಜನಾಂಗದರು ಸಹೊದರತೇಯಿಂದ ಜೀವಿಸಲು ಹಾಕಿಕೊಟ್ಟಿರುವ ಮಾರ್ಗೊಪಾಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಕೈಜೊಡಿಸಬೇಕೆಂದರು.  ಫಯಾಜ್ ಸಾಬ ಮುಲ್ಲಾ ನಿರೂಪಿಸಿದರು ಸಂಘಟನೇಯ ಸ್ಥಳಿಯ ಸಂಚಾಲಕರಾ ಮೈನುದ್ದಿನ್ ಮನಿಯಾರ ಅವರು ವಂದಿಸಿದರು ಮತ್ತು ಸಂಘಟನೇಯ ಮುಜೀಬ್, ಮುಜಾಹೀದ್, ಅಮೀನ್, ಹಾಫೀಜ್ ರಫೀಸಾಬ. ಸಲಿಂ ಮನಿಯಾರ. ಎಮ್.ಡಿ. ರಫೀ ಹಾಗು ಪಟ್ಟಣದ ಎಲ್ಲಾ ಸರ್ವಧರ್ಮಿಯರು ಬಾಗವಹಿಸಿದ್ದರು ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *