ಚಿಕ್ಕಸಿಂದಗಿ “ಕಮಲ ಅರಳಿಸೋಣ, ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ”

Spread the love

ಚಿಕ್ಕಸಿಂದಗಿಕಮಲ ಅರಳಿಸೋಣ, ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ

ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಇಂದು ಚಿಕ್ಕಸಿಂದಗಿ ಗ್ರಾಮದಲ್ಲಿ, ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀ ರಮೇಶ ಭೂಸನೂರ ಅವರ ಪರವಾಗಿ, ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಮನೆ-ಮನೆಗೆ ತೆರಳಿ ಮತಪ್ರಚಾರ ಮಾಡಿ, ಜನರ ಹಿತಕ್ಕೆ ಸ್ಪಂದಿಸುವ ನಾಯಕ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಮತದಾರರಲ್ಲಿ ಬೆಂಬಲ ಕೋರಿದರು. ಈ  ಸಂದರ್ಭದಲ್ಲಿ ಶ್ರೀ ಶಿವಯೋಗಿ ಮೂಡಗಿ, ಶ್ರೀ ಬಸಲಿಂಗಪ್ಪ ಬಿರದಾರ, ಶ್ರೀಮತಿ ಮಲ್ಲಮ್ಮ ಜೋಗುರ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *