7.50 ಮೀಸಲಾತಿ ನೀಡಿ:ಕೂಡ್ಲಿಗಿ ತಾಲೂಕು ದಲಿತ ಹಕ್ಕುಗಳ ಹೋರಾಟ ಸಮಿತಿ ಹಕ್ಕೊತ್ತಾಯ….

Spread the love

7.50 ಮೀಸಲಾತಿ ನೀಡಿ:ಕೂಡ್ಲಿಗಿ ತಾಲೂಕು ದಲಿತ ಹಕ್ಕುಗಳ ಹೋರಾಟ ಸಮಿತಿ ಹಕ್ಕೊತ್ತಾಯ….

 -ವಿಜಯನಗರ ಜಿಲ್ಲೆ ಕೂಡ್ಲಿಗಿ,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಸ್ಸಿ ಎಸ್ಟಿಗೆ 7.50% ಮೀಸಲಾತಿ ಹೆಚ್ಚಿಸಬೇಕು.ಸರ್ಕಾರ ಬ್ಯಾಕ್ ಲಾಕ್ ಉದ್ಯೋಗಗಳನ್ನು  ಭರ್ತಿ ಮಾಡಬೇಕು, ಹಾಗೂ ಎಲ್ಲಾ ಎಸ್ಸಿ ಎಸ್ಟಿ ಬಡ ನಿರಾಶ್ರಿತರಿಗೆ ನಿವೇಶನ ಸಹಿತ ವಸತಿ ಮಂಜೂರು ಮಾಡಬೇಕು.ಎಸ್ಸಿ ಎಸ್ಟಿ ನಿರುದ್ಯೋಗ ಯುವಕರಿಗೆ ತಿಂಗಳಿಗೆ 10.000 ನಿರುದ್ಯೋಗ ಬತ್ತೆ ನೀಡಬೇಕು, ತಿಂಗಳಿಗೆ ಖಾಸಗಿ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಯುವಕರಿಗೆ ಯುವತಿಯರಿಗೆ ಉದ್ಯೋಗ ನೀಡಬೇಕು ಎಂದು. ಸಮಿತಿ ಸರ್ಕಾರಕಗಳಿಗೆ ಹಕ್ಕೊತ್ತಾಯ ಮಾಡಿದೆ, ಸಮಿತಿಯ ತಾಲ್ಲೂಕು ಸಂಚಾಲಕ ಬಿ.ಟಿ.ಗುದ್ದಿ ಚಂದ್ರು,ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ.ಕುರಿಹಟ್ಟಿ ಜಿ. ಓಬಣ್ಣ,ಮಡಕಲಕಟ್ಟೆ ಎ.ಪಾಲಯ್ಯ ಹಾಗೂ ದಲಿತ ಮುಖಂಡರು ಒತ್ತಾಯಿಸಿದರು.ಕರ್ನಾಟಕ ದಲಿತ ಹಕ್ಕುಗಳ ಹೋರಾಟ ತಾಲೂಕು ಸಮಿತಿ,ದಂಡಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಲಾಯಿತು.ಶಿರಸ್ಥೇದಾರರಾದ ಶ್ರೀಮತಿ ಅರುಂಧತಿ ನಾಗವಿರವರು ಹೋರಾಟಗಾರರ ಹಕ್ಕೊತ್ತಾಯ ಪತ್ರವನ್ನು  ಸ್ವೀಕರಿಸಿದರು.ವಂದೇ ಮಾತರಂ ವಿ.ಜಿ.ವೃಷಭೇಂದ್ರ  ಕೂಡ್ಲಿಗಿ-9008927428

Leave a Reply

Your email address will not be published. Required fields are marked *