ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆಗೆ ನೂತನ 108 ಅಂಬುಲೆನ್ಸ್ ವಾಹನ…
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ,ಆರೋಗ್ಯ ಇಲಾಖೆ ನೂತನ 108 ತುರ್ತು ಅಂಬುಲೆನ್ಸ್ ವಾಹನ ಕಲ್ಪಿಸಿದೆ.ಪಪಂ ಅಧ್ಯಕ್ಷೆ ಶ್ರೀಮತಿ ಶಾರದಾಬಾಯಿರವರು ಅಂಬುಲೆನ್ಸ್ ವಾಹನಕ್ಕೆ ಪೂಜೆ ನೆರವೇರಿಸಿ ಸಾರ್ವಜನಿಕ ಸೇವೆಗೆ ಅರ್ಪಿಸಿದರು. ತಾಲೂಕು ವೈದ್ಯಾಧಿಕಾರಿ ಡಾ”ಷಣ್ಮುಖನಾಯ್ಕ,ವೈದ್ಯಾಧಿಕಾರಿ ಡಾ”ವಿನಯ ಕುಮಾರ,ವಿಭಾಗೀಯ ಮುಖ್ಯಸ್ಥರಾದ ಸದಾನಂದ, ಜಿಲ್ಲಾಮುಖ್ಯಸ್ಥರಾದ ಹಿನಯ ಕುಮಾರ,ಕೂಡ್ಲಿಗಿ ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ, ಕೆ.ಈಶಪ್ಪ, ಹೆಚ್.ಎಮ್.ಸಚಿನ ಕುಮಾರ, ಚಂದ್ರು, ದಲಿತ ಮುಖಂಡ ಎಸ್.ದುರುಗೇಶ, ವಾಲ್ಮೀಕಿ ಮುಖಂಡರಾದ ಬಿ.ಭೀಮೇಶ,ಸುರೇಶ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಕೆಲ108 ಅಂಬುಲೆನ್ಸ್ ಸಿಬ್ಬಂದಿಯವರು ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿ ಹಾಜರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-