ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ…

Spread the love

ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ…

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು ಪ್ರಕಟಿಸಿದ್ದಾರೆ. ಪ್ರಥಮ: ಪ್ರಮೀಳಾ ಎಸ್ ಪಿ ಹಾಸನ  ದ್ವಿತೀಯ: ಜಯಚಂದ್ರನ್ ಎಂ ಎಸ್ ತೃತೀಯ ಬಹುಮಾನವನ್ನು ಸಹನಾ ಗಿರೀಶ್ ಸುಳ್ಯ ಪಡೆದಿರುತ್ತಾರೆ. ಅತ್ಯುತ್ತಮ ಬಹುಮಾನಕ್ಕೆ  ವಾಣಿ ಶಿವಲಿಂಗಪ್ಪ ವಾರೀಮನಿ, ಮೀನಾಕ್ಷಿ  ಸೂಡಿ, ಸುಜಾತ ರೈ ಪಿ ಜಿ ಕಡಬ, ಪರಿಮಳ ಎನ್ ಎಂ ಪುತ್ತೂರು, ದೇವರಾಜ್ ನಿಸರ್ಗತನಯ, ವಾಣಿ ಧಿನೇಶ್ ಸುಳ್ಯ, ರಮೇಶ್ ಹೆಗಡೆ ಕೆರೆಕೋಣ ಪಡೆದಿರುತ್ತಾರೆ. ರಾಜ್ಯಾಧ್ಯಂತ ಸುಮಾರು 220 ಕ್ಕೂ ಮಿಕ್ಕ ಶಿಕ್ಷಕರು ಭಾಗವಹಿಸಿದ ಕವನ ಸ್ಪರ್ಧೆಯ ತೀರ್ಪುಗಾರರಾಗಿ ಯುವ ಕವಿ ಯಂಶ ಬೇಂಗಲ,  ಆಯೋಜಕರಾಗಿ ಸಾಹಿತಿ ಶುಭಾ ವಿಷ್ಣು ಸಭಾಹಿತ ಹೊನ್ನಾವರ, ವೀಕ್ಷಕರಾಗಿ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ನಿರ್ವಹಿಸಿದರು ಎಂದು ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *