ನಾಡ ಕವಿಗೆ ನಮನ…..

Spread the love

ನಾಡ ಕವಿಗೆ ನಮನ…..

ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ರಚನೆಕಾರರು ಹಾಗೂ ಸಾಹಿತಿಗಳಾದ ದಿ: ಶ್ರೀ ಹುಯಿಲಗೋಳ ನಾರಾಯಣರಾಯರ 137 ನೇ ಜನ್ಮದಿನದ ಅಂಗವಾಗಿ ಜನ್ಮ ದಿನಾಚರಣೆಯನ್ನು ರಾಯರು ವಾಸವಿದ್ದ ಮನೆ ಹಾಳದಿಬ್ಬ ದಲ್ಲಿ  ಆಚರಿಸಲಾಯಿತು. ಅಭಿಮಾನಿಗಳು ಬಳಗದ ಸಂಚಾಲಕರಾದ ಮುತ್ತಣ್ಣ ಭರಡಿ ಮಾತನಾಡಿ ಕಳೆದ 7 ವರ್ಷಗಳಿಂದ ಅವರು ವಾಸವಿದ್ದ ಮನೆಯನ್ನು  ಸ್ಮಾರಕ ಭವನ ನಿರ್ಮಾಣ ಮಾಡುವಂತೆ ಹಲವಾರು ಜನ ಪ್ರತಿನಿಧಿಗಳಿಗೆ ಗಮನಕ್ಕೆ ತರಲಾಗಿದೆ ಇಲ್ಲಿಯ ವರೆಗೆ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗೆ ಮುಂದಾಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಮುಂಬರುವ ದಿನಗಳಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ಮಾಡಲಾಗುವುದು  ಸಂದರ್ಭದಲ್ಲಿ ವಂಶಸ್ಥರಾದ ಮರಿ ಮೊಮ್ಮಗ ವಿನಯ ಹುಯಿಲಗೋಳ ಶ್ರೀ ರಾಮ ಸೇನೆಯ ರಾಜು ಖಾನಪ್ಪನವರ .ಹಾಳದಿಬ್ಬ ವಿವಿಧೋದ್ದೇಶ ಸಂಘದ ಅಧ್ಯಕ್ಷ ಕುಮಾರ ಮಂದಾಲಿ.ಗೋಪಾಲ ನಾಕೋಡ. ನಾರಾಯಣ ಪಾಟೀಲ. ವಾಸು ಹುಯಿಲಗೋಳ ಮನೋಜ ಪಾಟೀಲ ಪರಶುರಾಮ ಆಲೂರ. ರಾಕೇಶ ನವಲಗುಂದ ರಾಜು ಗಾಣಿಗೇರ. ಆನಂದ ಹೊನ್ನಗುಡಿ. ಸೇರಿದಂತೆ ಹುಯಿಲಗೋಳ  ನಾರಾಯಣರಾವ್ ಅಭಿಮಾನಿಗಳು  ಉಪಸ್ಥಿತರಿದ್ದರು..

ವರದಿ – ಮುತ್ತಣ್ಣ ಬುರಡಿ.

Leave a Reply

Your email address will not be published. Required fields are marked *