ಗಿಡನೆಟ್ಟು ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ ಗಜಾನನ ಮಂಗಸೂಳಿ…

Spread the love

ಗಿಡನೆಟ್ಟು ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ ಗಜಾನನ ಮಂಗಸೂಳಿ

ಜನಸ್ಪಂದನ ನ್ಯೂಸ್, ಅಥಣಿ- ಪರಿಸರ ಸಂರಕ್ಷಣೆಯನ್ನು ನಮ್ಮ ಆದ್ಯ ಕರ್ತವ್ಯವಾಗಿ ಮೈಗೂಡಿಸಿಕೊಂಡು ನಮ್ಮಲ್ಲಿ ಜರುಗುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಗಿಡಗಳನ್ನು ನೆಟ್ಟರೆ ಮುಂದಿನ ಪೀಳಿಗೆಗೆ ಉತ್ತಮ‌ ಪರಿಸರವನ್ನು ಕೊಡುಗೆಯಾಗಿ ಕೊಡಬಹುದು ಎಂದು ಅಥಣಿ ಬ್ಲಾಕ್ ಕಾಂಗ್ರೇಸ್ ಯೂಥ್ ಅಧ್ಯಕ್ಷ ರವಿ ಬಡಕಂಬಿ ಅವರು ಹೇಳಿದರು. ಅವರು ಸ್ಥಳೀಯ ಜತ್ತ ರಸ್ತೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಾಂಗ್ರೇಸ್ ಮುಖಂಡ ಗಜಾನನ ಮಂಗಸೂಳಿ ಅವರ 52 ನೇ ಹುಟ್ಟುಹಬ್ಬವನ್ನು ಗಿಡನೆಟ್ಟು ಆಚರಿಸಿ ಮಾತನಾಡಿದರು. ನಂತರ ಮಾತನಾಡಿದ ಮುಖಂಡ ಗಜಾನನ ಮಂಗಸೂಳಿ ಅವರು ನನ್ನ ಹುಟ್ಟುಹಬ್ಬದಂದು ಈ ಪವಿತ್ರ ದೇವಸ್ಥಾನದಲ್ಲಿ ಗಿಡನೆಟ್ಟು ವಿನೂತನವಾಗಿ ಆಚರಿಸಿದ ಕ್ಷಣವನ್ನು ನಾನು ಯಾವತ್ತೂ ಮರೆಯಲಾರೆ ಈ ಎಲ್ಲ ಸ್ನೇಹಿತರಿಗೆ, ಅಭಿಮಾನಿಗಳಿಗೆ ನಾನು ಚಿರಋಣಿ ಎಂದರು. ಈ ಹುಟ್ಟುಹಬ್ಬ ಆಚರಣೆಯಲ್ಲಿ ಮಹಾದೇವ ಬಡಕಂಬಿ, ಮುತ್ತಣ್ಣ ಸಂತಿ, ರಾಮಲಿಂಗ ಬಡಕಂಬಿ, ಮಾರುತಿ ಸವದತ್ತಿ, ಶಂಕರ ಬಡಕಂಬಿ, ಸಚಿನ ಬಡಕಂಬಿ, ರಮೇಶ ಮಾಳಿ, ಮಹಾಂತೇಶ ಭಾಸಿಂಗಿ, ಏಕನಾಥ ಕುಂಬಾರ, ಶ್ರೀಶೈಲ ಬಡಕಂಬಿ, ಮುರುಗೇಶ ಮೋಳೆ, ಮಾಂತೇಶ ಬಡಕಂಬಿ, ಕೇದಾರಿ ಬಡಕಂಬಿ, ಪ್ರಶಾಂತ ಮಾಳಿ, ಮಹಾದೇವ ಚಮಕೇರಿ, ಮಂಜುನಾಥ ಬಡಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *