ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ತ್ವರಿತ ವಾಹನ  ( ಅಂಬುಲೆನ್ಸ್) ನ್ನು ವೈದ್ಯಾಧಿಕಾರಿಗಳಿಗೆ  ಹಸ್ತಾಂತರಿಸಿದರು.

Spread the love

ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ತ್ವರಿತ ವಾಹನ  ( ಅಂಬುಲೆನ್ಸ್) ನ್ನು ವೈದ್ಯಾಧಿಕಾರಿಗಳಿಗೆ  ಹಸ್ತಾಂತರಿಸಿದರು.

ಗಡಿಭಾಗದ  ಅನಂತಪುರ ಗ್ರಾಮದ  ಸಾರ್ವಜನಿಕರಿಗೆ ಅನುಕೂಲವಾಗಲೆಂದು ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ತ್ವರಿತ ವಾಹನ  ( ಅಂಬುಲೆನ್ಸ್) ನ್ನು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ  ಶ್ರೀಮಂತ (ತಾತ್ಯಾ) ಪಾಟೀಲ ಅವರು ತಾಲೂಕ ವೈದ್ಯಾಧಿಕಾರಿಗಳಿಗೆ  ಹಸ್ತಾಂತರಿಸಿದರು. ಈ ಸಮಯದಲ್ಲಿ ಅಥಣಿ ತಾಲೂಕ ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ, ಮುಖಂಡರಾದ ಶ್ರೀಪ್ರಕಾಶ ಡೊಳ್ಳಿ, ಶ್ರೀ ನಿಂಗಪ್ಪಾ ಕೊಕಲೆ, ಶ್ರೀ ರಾಜು ಮದಭಾವಿ, ಶ್ರೀ ದಾದಾ ಪಾಟೀಲ, ಶ್ರೀ ರಾಮ ಸೊಡ್ಡಿ, ಶ್ರೀ ಶಿವಾನಂದ ಗೋಲಬಾವಿ, ಶ್ರೀ ಶಿವಾನಂದ ಬಡಕೆ, ಶ್ರೀ ಬಾಹುಸಾಬ ಪತ್ತಾರ, ಶ್ರೀ ಶಶಿಶಾಂತ ಇರಳಿ, ಶ್ರೀ ಶಿವಾನಂದ  ಖೋತ್, ಶ್ರೀ ಬಾಳು ಜಾಧವ ಸೇರಿದಂತೆ ಮತ್ತಿತರ ಮುಖಂಡರು, ಆಸ್ಪತ್ರೆಯ ಸಿಬ್ಬಂದಿಯವರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *