ಮರಳಿ ಗ್ರಾಮದ ರೈತನ ಮಗಳ ಚಿನ್ನದ ಸಾಧನೆ…….

Spread the love

ಮರಳಿ ಗ್ರಾಮದ ರೈತನ ಮಗಳ ಚಿನ್ನದ ಸಾಧನೆ…….

ಗಂಗಾವತಿ ತಾಲ್ಲೂಕಿನ ಗ್ರಾಮೀಣ ಭಾಗದ  ಮರಳಿಯ  ವೆಂಕೋಬ ಪೂಜಾರ್ ಅವರ ಸುಪುತ್ರಿಯಾದ ಶರಣಮ್ಮ ಅವರು MSMS ಕಾಲೇಜ ನಲ್ಲಿ ವ್ಯಾಸಂಗ ಮಾಡಿ BA ಪದವಿ  ಕಲಾ ವಿಭಾಗದಲ್ಲಿ ವಿಜಯ ನಗರ ಶ್ರೀ ಕೃಷ್ಣ ವಿಶ್ವ ವಿದ್ಯಾಲಯಕ್ಕೆ  ಪ್ರಥಮ ಸ್ಥಾನ ಪಡೆದು ನಮ್ಮ ಕೊಪ್ಪಳ ಜಿಲ್ಲೆ ಮತ್ತು ಗಂಗಾವತಿ ತಾಲ್ಲೂಕಿನ ಮರಳಿ ಹಳ್ಳಿಗೆ ಕೀರ್ತಿ ತಂದು ಗ್ರಾಮೀಣ ಭಾಗದ ಎಷ್ಟೋ ವಿದ್ಯಾರ್ಥಿಗಳಿಗೆ ಆದರ್ಶ ಪ್ರೀಯಾರಾಗಿದ್ದಾರೆ  ಮನೆಯಲ್ಲಿ ಕೃಷಿ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿರದ ತಂದೆತಾಯಿ ಶಾಲೆ ಮುಗಿದ ಮೇಲೆ ಕೃಷಿಯಲ್ಲಿ ತಂದೆ ತಾಯಿಗೆ ಸಹಾಯ ಮಾಡುತ್ತಾ ಸಾಧನೆ ಗೈದಿದ್ದಾರೆ ಈ ವಿದ್ಯಾರ್ಥಿಯ ಸಾಧನೆ ಹೀಗೆ ಮುಂದುವರೆದು ದೇಶಕ್ಕೆ ನಾಡಿಗೆ ಕೀರ್ತಿ ಹೆಚ್ಚಿಸಲಿ ಎಂದು ಶುಭ ಕೋರುತ್ತೇವೆ ಹಾಗೂ ಈ ವಿದ್ಯಾರ್ಥಿಯ ಸಾಧನೆಗೆ ಕಾರಣೀಕರ್ತರಾದ MSMS ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದಕ್ಕೂ ಆಡಳಿತ ಮಂಡಳಿಯವರಿಗೆ ಧನ್ಯವಾದಗಳು.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *