ಹಸೂಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ…

Spread the love

ಹಸೂಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ…

ಹಸೋಡಿ ಗ್ರಾಮ ದೇವರಾದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಬಸ್ಟಾಂಡ್ ಅನ್ನು ಸ್ಥಳಾಂತರಿಸಲು ಒತ್ತಾಯಿಸಿ.  ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ hasodi ಗ್ರಾಮ ದೇವರಾದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ  ಹಿಂಭಾಗ ಜಾಗದಲ್ಲಿರುವ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಈ  ಕೆಲ ದಿನಗಳ ಹಿಂದೆ ಬಸ್ ಸ್ಟ್ಯಾಂಡ್   ನಿರ್ಮಾಣಗೊಂಡಿರುವುದು ಆದರೆ ಬಸ್ಟಾಂಡ್ ನಿರ್ಮಾಣವಾದ ಜಾಗವು ದೇವಸ್ಥಾನಕ್ಕೆ ಸಂಬಂಧಪಟ್ಟಿರುತ್ತದೆ. ಬಸ್ಟಾಂಡ್ ನಿರ್ಮಾಣಗೊಂಡ ದಿನದಿಂದಲೂ ಸಾರ್ವಜನಿಕರು ಸೇರಿದಂತೆ ಕೆಲ ಕಿಡಿಗೇಡಿಗಳು ಮಲ, ಮೂತ್ರ ವಿಸರ್ಜನೆ ಹಾಗೂ ಗುಟ್ಕಾ ತಂಬಾಕು ಎಲೆ ಅಡಿಕೆ  ಉಗಿದು  ದೇವಸ್ಥಾನದ  ಆವರಣವು ಸ್ವಚ್ಛತೆ ಇಲ್ಲದ ಕಾರಣದಿಂದ ಅಪವಿತ್ರ  ಗಳಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ ಆದ್ದರಿಂದ ನಮ್ಮ ಸಮಿತಿಯು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು ಪವಿತ್ರವಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನದ ಜಾಗದಲ್ಲಿರುವ ಬಸ್ಟಾಂಡ್ ಅನ್ನು ಸ್ಥಳಾಂತರಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.  ಒಂದು ವೇಳೆ ಈ ಕೂಡಲೇ ಕ್ರಮ ಕೈಗೊಂಡು  ಬಸ್ಟ್ಯಾಂಡ್   ತೆರವುಗೊಳಿಸದಿದ್ದಲ್ಲಿ ನಮ್ಮ  ಸಮಿತಿಯು ಉಗ್ರ ಹೋರಾಟ ನಡೆಸಲಾಗುವುದು.

ವರದಿಮಹೇಶ ಶರ್ಮಾ

Leave a Reply

Your email address will not be published. Required fields are marked *