ಮುಜರಾಯಿ ಇಲಾಖೆಯ ಅಭಿವೃದ್ಧಿಗಾಗಿ ಸೌ. ಶಶಿಕಲಾ ಜೊಲ್ಲೆ ಜಿ ಯವರು….

Spread the love

ಮುಜರಾಯಿ ಇಲಾಖೆಯ ಅಭಿವೃದ್ಧಿಗಾಗಿ ಸೌ. ಶಶಿಕಲಾ ಜೊಲ್ಲೆ ಜಿ ಯವರು….

ಬೆಂಗಳೂರಿನಲ್ಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಡಾ. ಮಹರ್ಷಿ ಆನಂದ ಗುರೂಜಿ ಅವರನ್ನು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭೇಟಿಯಾಗಿ, ಆಶೀರ್ವಾದ ಪಡೆದು, ಮುಜರಾಯಿ ಇಲಾಖೆಯ ಅಭಿವೃದ್ಧಿಗಾಗಿ ಅವರ ಮಾರ್ಗದರ್ಶನ ಕೋರಿದರು. ಇದಕ್ಕೆ ಸ್ಪಂದಿಸಿದ ಅವರು ಹಲವು ಸಭೆಗಳನ್ನು ನಡೆಸಿ, ಸಮಾಲೋಚಿಸಿ, ದೇಗುಲಗಳ ಅಭಿವೃದ್ಧಿ ಮಾಡೋಣ. ಇಲಾಖೆಯಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು. ಇದೇ ವೇಳೆ ಗರ್ಭಿಣಿಯರ ಮಾನಸಿಕ ಆರೋಗ್ಯ ಕಾಪಾಡಲು ಅವರನ್ನು ಮಠ-ಮಂದಿರಗಳಿಗೆ ಕರೆದುಕೊಂಡು ಹೋಗಿ, ಆಶೀರ್ವಚನ ನೀಡುವ ಕೆಲಸ ಮಾಡೋಣ ಎಂದು ಸಲಹೆ ನೀಡಿದರು. ಗುರೂಜಿಗಳು ತಮ್ಮ ಆಶ್ರಮದಲ್ಲಿ ಹಲವಾರು ಪಕ್ಷಿಗಳನ್ನು ಸಾಕಿದ್ದು, ಅವುಗಳ ಚಟುವಟಿಕೆಗಳನ್ನು ವೀಕ್ಷಿಸಿದರು. ತಮ್ಮದೇ ಆದ ಭಾಷೆಯಲ್ಲಿ ಸಂವಹನ ನಡೆಸುವ ಪಕ್ಷಿಗಳೊಂದಿಗೆ ತುಸು ಕ್ಷಣ ಕಳೆದಾಗ, ಅವುಗಳ ಆತ್ಮೀಯ ಒಡನಾಟ ಕಂಡು ಮನಸ್ಸಿಗೆ ಬಹಳ ಸಂತೋಷವಾಯಿತು ಎಂದು ಹೇಳಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *