ಬಾಪೂಜಿನಗರ(ಉದ್ಗಟ್ಟಿ ದೊಡ್ಡತಾಂಡ) ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಪಾಲ್ಗೊಂಡ ಎಂಪಿವೀಣಾ_ಮಹಾಂತೇಶ್!..

Spread the love

ಬಾಪೂಜಿನಗರ(ಉದ್ಗಟ್ಟಿ ದೊಡ್ಡತಾಂಡ) ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಪಾಲ್ಗೊಂಡ ಎಂಪಿವೀಣಾ_ಮಹಾಂತೇಶ್!..

ಹರಪನಹಳ್ಳಿ ಕ್ಷೇತ್ರದ ಬಾಪೂಜಿನಗರದಲ್ಲಿ ಅತ್ಯಂತ ವಿಶಿಷ್ಠವಾಗಿ ಬಂಜಾರರು ಆಚರಿಸುವ #ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಪಾಲ್ಗೊಂಡ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ, ಹರಪನಹಳ್ಳಿ ಕ್ಷೇತ್ರದ ಜನನಾಯಕಿ #ಶ್ರೀಮತಿಎಂಪಿವೀಣಾಮಹಾಂತೇಶ್ ಅವರು ಬಂಜಾರ ಸಂಸ್ಕೃತಿಯ ಪ್ರತೀಕ, ಬಂಜಾರ ಸೊಬಗಿನ ಉಡುಗೆ ತೊಟ್ಟ ಮಹಿಳೆಯರೊಂದಿಗೆ ಹಬ್ಬದ ಸಂಭ್ರಮಕ್ಕೆ ಮೆರಗು ನೀಡಿದರು. ತಮ್ಮ ತನು, ಮನ, ಧನ ಸಹಾಯದೊಂದಿಗೆ ಗ್ರಾಮದ ಜನತೆಯೊಂದಿಗೆ ಭಾಗವಹಿಸಿ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸುವ ಜನತೆಯೊಂದಿಗೆ ಸಂಭ್ರಮಿಸಿ ದೇವರ ದರ್ಶನ ಪಡೆದು, ಡಿಜೆ ಹಾಡುಗಳೊಂದಿಗೆ ಯುವಕ, ಯುವತಿಯರ ತಂಡದಲ್ಲಿ ಪಾಲ್ಗೊಂಡು ವಿಜ್ರಂಭಣೆಯಿಂದ ಕುಣಿದು ಸಂಭ್ರಮ, ಸಡಗರದಲ್ಲಿ ಮಿಂದೆದ್ದರು. ಬಂಜಾರ ಜನತೆ ಎಷ್ಟೇ ಕಷ್ಟದಲ್ಲಿದ್ದರು ತಮ್ಮ ಹಬ್ಬ ಹರಿದಿನಗಳನ್ನು ಅತ್ಯಂತ ಶ್ರೀಮಂತಿಕೆಯ ದ್ಯೋತಕವಾಗಿ ಆಚರಿಸುವುದು ಸಾಮಾನ್ಯ! ಇಂತಹ ನಾಡ ಹಬ್ಬದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ ಎಂದು ಉಚ್ಚರಿಸಿ, ಗ್ರಾಮಸ್ಥರ ಈ ಆಹ್ವಾನ, ಅವರು ನೀಡಿದ ಸನ್ಮಾನಕ್ಕೆ ಹೃದಯ ಮಿಡಿಯುತ್ತಿದೆ ಎಂದು ಖುಷಿಪಟ್ಟರು.. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ D ದೇವರಾಜ್ ನಾಯಕ್ ಶ್ರೀಮತಿ ವಿಜಿ ಬಾಯ್ ಶ್ರೀಮತಿ ಲಕ್ಷ್ಮೀಬಾಯಿ ಶ್ರೀ ನಾಗೇಂದ್ರ ನಾಯ್ಕ ಹಟ್ಟಿ ಗೌಡ್ರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಶ್ರೀ ನೆಮ್ಯ ನಾಯ್ಕ ಸೊಸೈಟಿ ಅಧ್ಯಕ್ಷರು ಶ್ರೀ ವೇದು ನಾಯ್ಕ್ P ಶ್ರೀ ಸಿದ್ದೇಶ್ ನಾಯ್ಕ ಶ್ರೀ ಜಿತು ನಾಯ್ಕ್ ಶ್ರೀ ರಮೇಶ್ ನಾಯ್ಕ ಶ್ರೀ ಉಮೇಶ್ ನಾಯ್ಕ ಶ್ರೀ ಬಾಲ್ಯ ನಾಯ್ಕ ಇನ್ನೂ ಅನೇಕ ಮಹಿಳೆಯರು ಹಾಗೂ ಯುವ ಮುಖಂಡರು ಭಾಗವಹಿಸಿದ್ದರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *