ಕ್ಷೇತ್ರದ ಜನರ ಹಿತಕ್ಕಾಗಿ ನನ್ನ ಸೇವೆ ನಿರಂತರ……

Spread the love

ಕ್ಷೇತ್ರದ ಜನರ ಹಿತಕ್ಕಾಗಿ ನನ್ನ ಸೇವೆ ನಿರಂತರ……

ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಮದಭಾವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರು ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ತುರ್ತುಸೇವಾ ವಾಹನ ( ಆಂಬುಲೆನ್ಸ್) ವನ್ನು ನೀಡಿದ್ದು, ಇಂದು ಶಾಸಕರ ಅನುಪಸ್ಥಿತಿಯಲ್ಲಿ ಗ್ರಾಮದ ಮುಖಂಡರ ನೇತ್ರತ್ವದಲ್ಲಿ ಮದಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಸಮಯದಲ್ಲಿ ಅಥಣಿ ತಾಲೂಕು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಮದಭಾವಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸರಿತಾ ಅಪ್ಪಾಸಾಬ ಚೌಗಲಾ, ಗ್ರಾಮದ ಮುಖಂಡರಾದ ಶ್ರೀ ರೇವಣ್ಣಾ ಪಾಟೀಲ, ಶ್ರೀ ಮಹಾದೇವ ಕೋರೆ, ಶ್ರೀ ಮುರಗೆಪ್ಪಾ ಮಗದುಮ, ಶ್ರೀ ಅಪಣ್ಣಾ ಮಗದುಮ್, ಶ್ರೀ ದಿಲೀಪ ಪವಾರ, ಶ್ರೀ ಕೃಷ್ಣಾ ಶಿಂದೆ, ಮದಬಾವಿ ಸರಕಾರಿ ಆಸ್ಪತ್ರೆಯ  ವೈದ್ಯಾಧಿಕಾರಿ ಡಾ. ಬಿ ಎಮ್ ಜಿತೇಂದ್ರ, ಶ್ರೀ ಶಿವಾನಂದ ಮಗದುಮ್, ಶ್ರೀ ಸಿದ್ದಲಿಂಗ ಇಬ್ರಾಹಿಂಪೂರ, ಶ್ರೀ ಸ್ವಾಮಿ ಕಾಂಬಳೆ, ಶ್ರೀ ಸಂಜಯ ಅದಾಟೆ, ಶ್ರೀ ಸಂತೋಷ್ ಕಲ್ಲೋತ್ತಿ, ಶ್ರೀ ಬಾಳು ಮಗದುಮ್, ಶ್ರೀ ಸತ್ಯಪ್ಪಾ ಕಾಂಬಳೆ ಸೇರಿದಂತೆ ಸ್ಥಳೀಯ ಹಲವಾರು ಮುಖಂಡರು, ಸಚಿವರ ಆಪ್ತ ಸಹಾಯಕರು, ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *