ತಾವರಗೇರಾ ಪಟ್ಟಣದ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರ ಮಡಲಿಗೆ ಚಿನ್ನದ ಪದಕ.

Spread the love

ತಾವರಗೇರಾ ಪಟ್ಟಣದ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರ ಮಡಲಿಗೆ ಚಿನ್ನದ ಪದಕ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣಾ ಅಧಿಕಾರಿಗಳಾದ ಮಾನ್ಯ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರು ತಾವರಗೇರಾ ಪಟ್ಟಣದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮನ್ಸ ಹಾಗೂ ವಾರೆಂಟ್ ಜಾರಿಗೊಳಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಕಾರ್ಯಕ್ಕೆ ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವಲ್ಲಿ ಆಯ್ಕೆಯಾಗಿ ದಿನಾಂಕ 02/04/2021 ರಂದು ಬೆಂಗಳೂರು ಮಹಾನಗರದಲ್ಲಿ ಪೊಲೀಸ್ ಧ್ವಜಾ ದಿನಾಚರಣೆಯ ಅಂಗವಾಗಿ 2020ನೇ ಸಾಲಿನಲ್ಲಿ ಅತ್ಯತ್ತಮ ‍ಕಾರ್ಯ ನಿರ್ವಹಿಸಿದ ಮೇಲಾಧಿಕಾರಿಗಳ ಹಾಗೂ ಠಾಣಾ ಸಿಬಂದಿ ಜೊತೆಗೆ ಕೀರ್ತಿಗೆ ಪಾತ್ರರಾದ ಗೀತಾಜಂಲಿ ಶಿಂಧೆಯವರಿಗೆ ಮಾನ್ಯ ಮುಂಖ್ಯಮಂತ್ರಿ ಪ್ರಶಸ್ತಿಯನ್ನ ತನ್ನ ಮಡಲಿಗೆ ದಕ್ಕಿಸಿಕೊಂಡು ನಮ್ಮ ಕೊಪ್ಪಳ ಜಿಲ್ಲೆಗೆ ಹೆಸರಾಗಿ, ಅದು ಮಹಿಳಾ ಅಧಿಕಾರಿಯಾಗಿ, ಅತಿ ಕಿರಿಯ ವಯಸ್ಸಿನಲ್ಲೇ ಮಾನ್ಯ ಮುಂಖ್ಯಮಂತ್ರಿಯವರಿಂದ ಚಿನ್ನದ ಪ್ರಶಸ್ತಿ ಪಡೆದು ಇಡಿ ಕರುನಾಡಿಗೆ ತೋರಿಸಿಕೊಟ್ಟ ಜಿಲ್ಲೆಯ ಪ್ರಥಮ ಮಹಿಳಾ ಅಧಿಕಾರಿಯ ಕೀರ್ತಿಗೆ ಪಿ.ಎಸ್.ಐ ಗೀತಾಜಂಲಿ ಶಿಂಧೆಯವರು ಪಾತ್ರರಾದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು. ತಮ್ಮ ಈ ಕೀರು ವಯಸ್ಸಿನಲ್ಲಿ ಇಂತಹ ಸಾಧನೆಗೆ ಪಾತ್ರರಾದ ತಾವುಗಳು, ತಾವು ಪಟ್ಟಿರುವ ಶ್ರಮವೇ ಈ ಸಾಧನಗೆ ಮೂಲ ಎನ್ನುತ್ತ ತಮ್ಮ ಈ ಕಾರ್ಯಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತ ಮುಂದಿನ ತಮ್ಮ ಪ್ರತಿ ಹೆಜ್ಜೆ ಹೆಜ್ಜೆಯು ಯಶಸ್ವಿನ ಹಾಧಿ ಸಾಗಲೆಂದು  ಆಶಿಸುತ್ತೇವೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *