ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದಲ್ಲಿ ಇಂದು ಜೀಯೋ ನೆಟವರ್ಕ ಟವರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವು ಕಾಲ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು…

Spread the love

ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದಲ್ಲಿ ಇಂದು ಜೀಯೋ ನೆಟವರ್ಕ ಟವರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವು ಕಾಲ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು…

ಜುಮಲಾಪೂರ ಗ್ರಾಮದ ದೊಡ್ಡಬಸವೇಶ್ವರ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಮೊಬೈಲ್ ಟವರ್ ನಿಂದ ಅಗ್ನಿ ಅವಗಡ ಸಂಭವಿಸಿದ್ದು, ದಟ್ಟವಾಗಿ ಕಾಣಿಸಿಕೊಂಡ ಹೊಗೆ ಸಹಿತ ಬೆಂಕಿಯಿಂದ ಕೆಲ ಕಾಲ ಸುತ್ತಲಿನ ಸಾರ್ವಜನಿಕರು ಆತಂಕ ಭಯ ವಾತಾವರಣ ವಾದ ಸಂದರ್ಭದಲ್ಲಿ.  ಸ್ಥಳದಲ್ಲಿನ ಮಾಹಿತಿ ಅರಿತ ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ದೊಡ್ಡಬಸವ ರಾಟಿಯವರು  ಅಗ್ನಿ ಶಾಮಕ ಠಾಣಿಗೆ ವಿಷಯ ತಿಳಿಸಿದರು. ಕೆಲವು ಹೊತ್ತಿನಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯವರು ಸ್ಥಳಕ್ಕೆ ಆಗಮಿಸಿ  ಬೆಂಕಿಯನ್ನು ನಂದಿಸಿದರು. ಏನೆ ಆಗಲಿ ಇಂತಹ ಅಪಾಯಕಾರಿ ವಸ್ತುಗಳು ಊರಿನಲ್ಲಿ ಮದ್ಯದಲ್ಲಿರುವದು ಸೂಕ್ತವಲ್ಲ  ಹಾಗಾಗಿ ಪದೆ ಪದೆ ಈ ತರಹದ ಘಟನಾವಳಿಗಳಿಂದ ಬೇಸತ್ತಿದ್ದಾರೆ.  ಸ್ಥಳೀಯರಾದ ದೊಡ್ಡಪ್ಪ ಊರಾಳ. ಬಸವರಾಜ ರಾಟಿ. ತಿಪ್ಪಣ್ಣ ಮಡ್ಡೆರ. ಶಿವುಪುತ್ರ ಬಪ್ಪೂರ. ಅಂಬ್ರೇಶ ಹಳ್ಳದಂಡಿ. ಕರಿಯಪ್ಪ ನಾಯಕ. ಇನ್ನೂ ಹಲವು ಗ್ರಾಮಸ್ಥರು ಟವರನ ಸ್ಥಳ ಬದಲಾವಣಿಗೆ  ಆಗ್ರಹಿಸಿದ್ದಾರೆ.

ವರದಿ – ಅಮಾಜಪ್ಪ ಹೆಚ್ ಜುಮಾಲಾಪೂರ

Leave a Reply

Your email address will not be published. Required fields are marked *