ದೇಶ ಕಾಯೋ ವೀರ ಯೋಧರಿಗೆ ಸುಮಾರು 1500 ರಾಖಿ ಕಳಿಸಿ ತಮ್ಮ ಸಹೋದರತ್ವ ಬಾಂದವ್ಯ ಮೆರೆದಿದ್ದಾರೆ ಕೊಪ್ಪಳ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರು.

Spread the love

ದೇಶ ಕಾಯೋ ವೀರ ಯೋಧರಿಗೆ ಸುಮಾರು 1500 ರಾಖಿ ಕಳಿಸಿ ತಮ್ಮ ಸಹೋದರತ್ವ ಬಾಂದವ್ಯ ಮೆರೆದಿದ್ದಾರೆ ಕೊಪ್ಪಳ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಇನ್ನರ್ ವಿಲ್ ಕ್ಲಬ್ ಮತ್ತು ಮಹಿಳಾ ಸ್ವಸಹಾಯ ಸಂಫದ ಸದಸ್ಯರು ಗಡಿಯಲ್ಲಿ ದೇಶ ಕಾಯುತ್ತಿರುವ ನಮ್ಮ ವೀರ ಸೈನಿಕ ಸಹೋದರರಿಗಾಗಿ ವಿವಿಧ ಬಗೆಯ ಸುಮಾರು 1500 ರಾಖಿಗಳನ್ನು ತಯಾರಿಸಿ ಪಟ್ಟಣ ಪಂಚಾಯತ್ ಮೂಲಕ  ಸೈನಿಕ ಸಹೋದರರಿಗೆ ತಲುಪಿಸಿದರು. ರಕ್ಷಾಬಂಧನ ಪ್ರಯುಕ್ತ ಸಹೋದರತ್ವ ಬಾಂದವ್ಯ ವೃದ್ಧಿಸುವ ಉದ್ದೇಶದಿಂದ ಸೈನಿಕರಿಗೆ ರಾಖಿ ಕಳಿಸಿದ ಮಹಿಳಾ ಸಂಘದ ಸದಸ್ಯರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯೆ ನಂದಿತಾ ದಾನರಡ್ಡಿ, ಸಿಬಂದಿ ಶಿವಕುಮಾರ್ ಸರ್ ಗಣಾಚಾರಿ, ಸ್ವ ಸಹಾಯ ಸಂಘದ ಮಹಿಳಾ ಸದಸ್ಯರ ಕಾರ್ಯವನ್ನು ಕೊಂಡಾಡಿದರು.

ವರದಿ – ಹುಸೇನ್ ಬಾಷಾ ಮೊತೇಖಾನ್

Leave a Reply

Your email address will not be published. Required fields are marked *