ಗೊ ರು ಚನ್ನಬಸಪ್ಪ ಶರಣರಿಗೆ ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಿ.

Spread the love

ಗೊ ರು ಚನ್ನಬಸಪ್ಪ ಶರಣರಿಗೆ ಬಾರಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಿ.

ಈ ಬಾರಿ ಕೇಂದ್ರ ಸರ್ಕಾರವು ಒಂದು ಅತ್ಯುತ್ತಮ ಹೆಜ್ಜೆ ಇಟ್ಟಿರುವುದು ಸಂತೋಷಕರ ಸಂಗತಿಯಾಗಿದೆ.ಇದು ಕಾರ್ಯರೂಪಕ್ಕೆ ಬಂದರೆ,ಕೇಂದ್ರ ಸರ್ಕಾರದ ಕೀರ್ತಿ ವಿಶ್ವ ಮಟ್ಟದಲ್ಲಿ ಪಸರಿಸುತ್ತದೆ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಜನರ ಆಯ್ಕೆಯ ಮೇಲೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ ಪ್ರಯುಕ್ತ ಮೋದಿ ಜಿಯವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳು ಸಲ್ಲಿಸುತ್ತೇವೆ.  ಈ ಹಿನ್ನೆಲೆಯಲ್ಲಿ ನಿಸ್ವಾರ್ಥ ಸೇವಕರೆಂದೇ ಗೌರವ ಪಡೆದಿರುವ ಕರ್ನಾಟಕದ ರಾಜ್ಯದ ಜಾನಪದ ವಿದ್ವಾಂಸರೂ, ಸಾಹಿತಿ, ಸಂಘಟಕರು, ಸಂಯೋಜಕರಾಗಿ ಹಗಲಿರುಳು ಸೇವೆಯನ್ನು ಸಲ್ಲಿಸುತ್ತಿರುವ ಗೊ ರು ಚನ್ನಬಸಪ್ಪ ಶರಣರನ್ನು ಕೇಂದ್ರ ಸರಕಾರವು ಕೊಡುಮಾಡುವ ಅತ್ಯುನ್ನತ ಪ್ರಶಸ್ತಿಗೆ ಕರ್ನಾಟಕ ಜನತೆಯ ಪರವಾಗಿ ನಾನು ನಾಮ ನಿರ್ದೇಶನ ಮಾಡಲು ಹಾಗೂ ಪ್ರಶಸ್ತಿಯನ್ನು ನೀಡಲು ಮೋದಿ ಜಿಯವರಲ್ಲಿ ವಿನಂತಿಸಿಕೊಳ್ಳುತ್ತಾ,ಗೊ ರು ಚನ್ನಬಸಪ್ಪ ನವರ ಸಾಧನೆಯ ಸೇವೆಗಳನ್ನು ತಮ್ಮ ಮುಂದೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಈ ಮೂಲಕ ಮಾಡಲಾಗಿದೆ.

ಗೊ ರು ಚನ್ನಬಸಪ್ಪನವರ ಜನನ,ಕಾಯಕ,ಸೇವೆ : ಕನ್ನಡ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಗೊ. ರು. ಚೆನ್ನಬಸಪ್ಪನವರು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ 18 ನೇ ಮೇ 1930 ರಲ್ಲಿ ರುದ್ರಪ್ಪಗೌಡರು ಮತ್ತು ಅಕ್ಕಮ್ಮ ದಂಪತಿಗಳ ಮಗನಾಗಿ ಜನಿಸಿದರು.ಮಾಧ್ಯಮಿಕ ಮತ್ತು ಪ್ರೌಢಶಾಲಾ ತರಗತಿಗಳಲ್ಲಿ ಅಭ್ಯಾಸ ಮಾಡಿ,ತರುವಾಯ ಇದೆ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಚಳವಳಿಯಲ್ಲಿ ಪಾಲುಗೊಂಡಿದ್ದು (ಅಂದರೆ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಕೀರ್ತಿ ಇವರದು) ನಾವ್ಯಾರು ಯಾರು ಮರೆಯುವಂತಿಲ್ಲ. 1948 ರ ವರ್ಷದಲ್ಲಿ ಶಾಲಾ ಶಿಕ್ಷಕರಾಗಿ 18ನೇ ವಯಸ್ಸಿನಲ್ಲೇ ತಮ್ಮ ಕಾಯಕ ಜೀವನವನ್ನು ಆರಂಭಿಸಿದ ಚನ್ನಬಸಪ್ಪನವರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ,ವಿವಿಧ ಸಂಘಸಂಸ್ಥೆಗಳಿಗಾಗಿ ದುಡಿದ್ದಾರೆ. ಗಾಂಧೀಜಿಯ ಪ್ರಭಾವದಿಂದ ಖಾದಿ ಧರಿಸುವುದು ಇವರ ರೂಢಿಯಾಯಿತು. ಈ ಎರಡನ್ನು ಇಂದಿಗೂ ಅವರು ಪರಿಪಾಲಿಸಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತೇವೆ. ಗೊ ರು ಚನ್ನಬಸಪ್ಪನವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಮಿಷನರ್ ಆಗಿ ಮಹತ್ವದ ಸೇವೆ ಸಹ ಸಲ್ಲಿಸಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ನಡೆಸಿ,ನಾಡಿಗೆ ನೀಡಿ,ಕರುನಾಡಿಗೆ ಮಾದರಿಯಾಗಿದ್ದಾರೆ. ಅಲ್ಲದೆ ಕನ್ನಡ ಜಾನಪದ ಕ್ಷೇತ್ರಕ್ಕೆ ಮರೆಯಲಾರದ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಇವರ ಪಾತ್ರ  ಮಹತ್ವದಾಗಿತ್ತು.ಸಧ್ಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಸಾಂಸ್ಕೃತಿಕ ಕಾರ‍್ಯಕ್ರಮ ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ ಇವರದು. ವಿದೇಶಿ ಕನ್ನಡಿಗರ ಆಹ್ವಾನದ ಮೇರೆಗೆ ಅಮೆರಿಕಾ ಭೇಟಿ, ಅಲ್ಲಿ ಕನ್ನಡದ ಕಂಪು ಹರಿಸಿದ ಹಿರಿಮೆಗೆ ಸಾಕ್ಷಿಯಾಗಿದ್ದಾರೆ. ಕನ್ನಡ ಮತ್ತು ಶರಣ ಸಾಹಿತ್ಯ ಪರಿಷತ್ತುಗಳ ಬೆಳವಣಿಗೆಗಾಗಿ ದತ್ತಿ ನಿಧಿ ಸಂಗ್ರಹಣೆ ಕಾರ್ಯ ಸಹ ಇವರ ನೇತೃತ್ವದಲ್ಲಿ ಮಾಡಿರುವುದು ಹೆಮ್ಮೆ ಕಲಸವಾಗಿದೆ. ಇದಲ್ಲದೆ ಇವರ ಅವಧಿಯಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಹಾಗೆ ಇವರ ನೂರೈವತ್ತಕ್ಕೂ ಹೆಚ್ಚು ಮಹತ್ವ ಪೂರ್ಣ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಧಾರೆಯೆರೆದಿದ್ದಾರೆ. ಗೊ ರ ಚನ್ನಬಸಪ್ಪ ನವರ ದತ್ತಿ ನಿಧಿಯಿಂದ

ಅಂದರೆ ಇವರು ನೀಡಿರುವ ಹಣದಿಂದ ಇವರ ಹೆಸರಿನಲ್ಲಿ ಪ್ರತಿ ವರ್ಷ ಶರಣ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ  ಕೆಲಸ ಮಾಡಿರುವ ಸಾಧಕರನ್ನು ಹಾಗೂ ಕೃತಿಗಳನ್ನು   ರಚಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗೆ ಇವರ ನಿಸ್ವಾರ್ಥ ಕಾರ‍್ಯನಿರ್ವಹಣೆಗಾಗಿ ಅನೇಕ ಸಂಘ ಸಂಸ್ಥೆ, ಸರಕಾರಗಳಿಂದ  ಪ್ರಶಸ್ತಿ ಬಂದಿವೆ. ಅದರಲ್ಲಿ ಪ್ರಮುಖವಾದ ಪ್ರಶಸ್ತಿಗಳೆಂದರೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ,ಬಸವ ಪ್ರಶಸ್ತಿ ಸೇರಿದಂತೆ ಮುಂತಾದುವು ಸೇರಿವೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗೊ ರು ಚನ್ನಬಸಪ್ಪ ಶರಣರು ಸಂಪೂರ್ಣವಾಗಿ ತೊಡಗಿಸಿಕೊಂಡು ಅತ್ಯಂತ ಭಕ್ತಿ ಭಾವದಿಂದ ಶ್ರಮಿಸಿದ್ದಾರೆ. ಹಾಗಾಗಿ ಗೊ ರು ಚನ್ನಬಸಪ್ಪ ನವರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಗತಿಪರ ಚಿಂತಕರು,ಸೌಹಾರ್ದತೆಯ ಪ್ರತಿಪಾದಕರು, ಸರ್ವ ಧರ್ಮಗಳ ಸಮನ್ವಕಾರರು, ವಿಶ್ವ ಭಾತೃತ್ವ ಪ್ರತಿರೂಪವೇ ಆಗಿ ನಿಸ್ವಾರ್ಥ ಜಾನಪದ,ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮತಾವಾದ ಹರಿಕಾರ,ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ವಿಶ್ವ ಬಂಧು ಅಣ್ಣ ಬಸವಣ್ಣನವರ ಹಾಗೂ ವಿಶ್ವ ದಾರ್ಶನಿಕರ ಆಶಯದಂತೆ ಸರ್ವರ ಹಾಗೂ ನಾಡಿನ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಅಲ್ಲದೆ ಮಾನವೀಯತೆ ಮೌಲ್ಯಗಳು, ಸಮಾನತೆಯ ತತ್ವಗಳನ್ನು ದೇಶದ ಉದ್ದಗಲಕ್ಕೂ ಉಪನ್ಯಾಸಗಳ ಮೂಲಕ ಜನರಲ್ಲಿ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತೀದೇವೆ. ಹೀಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಗೊ ರು ಚನ್ನಬಸಪ್ಪ ನವರು, ಈ  ನಾಡಿನ ಹೆಮ್ಮೆಯ ಶರಣರೆಂದೆ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.ಆದಕಾರಣ ಈ ಬಾರಿಯಾದರೂ ಗೊ ರು ಚನ್ನಬಸಪ್ಪ ಶರಣರಿಗೆ  ಪದ್ಮಶ್ರೀ,ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಲ್ಲಿ ಯಾವುದಾದರೂಂದು ಪ್ರಶಸ್ತಿಯನ್ನು ನೀಡಿ,ಭಾರತ ಸರ್ಕಾರ ಗೌರವಿಸಿಬೇಕು, ಗೌರವಿಸುವ ಮೂಲಕ ಕೇಂದ್ರ ಸರ್ಕಾರ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕೆಂಬುವುದು ಈ ನಾಡಿನ ಪ್ರಜ್ಞಾವಂತ ಜನರ ಕೂಗಾಗಿದೆ ಜೊತೆಗೆ ಒತ್ತಾಸೆಯಾಗಿದೆ.ಈ ದಿಸೆಯಲ್ಲಿ ಇಂದಿನ ಭಾರತ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಆಶಾಭಾವನೆ ನಮ್ಮದು. ಶರಣರ ಚಿಂತನೆ : ಬಸವಣ್ಣನವರು ಸೇರಿದಂತೆ ವಿಶ್ವ ದಾರ್ಶನಿಕರು ಕೇವಲ ಇಂದು ಭಾಷಣದ ವಸ್ತುಗಳಾಗಿದ್ದಾರೆ ಹೊರತು ಆಚರಣೆಯಲಿಲ್ಲ. ಮೌಲ್ಯಧಾರಿತ ಆಲೋಚನೆಗಳು ಮಾಯವಾಗಿ ಸಮಾಜ ತಪ್ಪು ದಾರಿಗೆ ಹೋಗುತ್ತಿದೆ ಎನ್ನುವ ಆತಂಕ ಎಲ್ಲೋ ಒಂದು ಕಡೆ ಕಾಡುತ್ತಿದೆ. ಇದಕ್ಕೆ ತಾರ್ತಿಕ ಅಂತ್ಯ ಹಾಡಲು ಗೊ ರು ಚನ್ನಬಸಪ್ಪ ಶರಣರು ನವ ಸಮಾಜ ನಿರ್ಮಾಣದ ಅಭಿವೃದ್ಧಿಗಾಗಿ ಸದಾ ವೈಚಾರಿಕ ಚಿಂತನೆ ಮಾಡುತ್ತಿರುವುದು  ಉತ್ತಮ ಬೆಳವಣಿಗೆ ಮತ್ತು ಅದೇ ದಿಸೆಯಲ್ಲಿ ಅವರು ಹೆಜ್ಜೆ ಹಾಕುತ್ತಿರುವುದು ಅತ್ಯುತ್ತಮ ಕಾರ್ಯ ಎನ್ನಬಹುದು.ಅಂತೆಯೇ ಗೊ ರು ಚನ್ನಬಸಪ್ಪ ಶರಣರು ವಿಚಾರ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದಾರೆ.ಗೊಡ್ಡು ಸಂಪ್ರದಾಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದ್ದಾರೆ, ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ  ಸದಾ ದ್ವನಿ ಎತ್ತುತ್ತಿದ್ದಾರೆ. ಜನರಲ್ಲಿ ವೈಜ್ಞಾನಿಕ  – ವೈಚಾರಿಕ  ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ.ಹಾಗಿಯೇ ನಿರ್ಲಿಕ್ಷಿತ ಸಮುದಾಯಕ್ಕೆ ಆಸರೆಯಾಗಿ ದುಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ವಚನ ಚಳವಳಿ ಆಶಯಗಳನ್ನು ಹೊತ್ತು  ಜನಸಾಮಾನ್ಯರನ್ನು  ಗೊಡ್ಡು ಸಂಪ್ರದಾಯದ ಕುರಿತು ಎಚ್ಚರಿಸಿ,ಮೌಲ್ಯಯುತ ಆಚರಣೆಗಳನ್ನು ಆಚರಣೆ ಮಾಡುವಂತೆ ತಿಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಬಸವ ತತ್ವ ಅನುಷ್ಠಾನಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದಾರೆ. ಸಮಾಜದಲ್ಲಿ ದ್ವೇಷದ ವಿಷಯ ಬೀಜ ಬಿತ್ತುವ ಕೆಲಸ ಖಂಡಿತಾ ಬೇಡ, ಪ್ರೀತಿ – ಸ್ನೇಹ, ಸೌಹಾರ್ದತೆ –  ಶಾಂತಿಯ ವೈಜ್ಞಾನಿಕ ವಿಚಾರಗಳು ಬಿತ್ತುವ ಕೆಲಸ ಆಗಬೇಕೆಂದು ಕರೆಯನ್ನು ನೀಡಿದ್ದಾರೆ. ಮತ್ತು ಆ ದಿಸೆಯಲ್ಲಿ ಪ್ರತಿಪಾದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಜನ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಅಭಿಯಾನಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಸಾಕ್ಷಿ.  ಹೀಗೆ ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡು ಸುಂದರ,ನೆಮ್ಮದಿಯ ಬದುಕಿನತ್ತ ಗೊ ರು ಚನ್ನಬಸಪ್ಪ ಶರಣರ ವಿಚಾರಗಳು ಸಾಗುತ್ತಿವೆ ಶರಣ ಬಂಧುಗಳೆ. ಗೌರವದ ನುಡಿ:  ಶರಣರ ತತ್ವ ಸಿದ್ಧಾಂತಗಳಾದ ಕಾಯಕ, ದಾಸೋಹ,ಶಿಕ್ಷಣ,ಸಮಾನತೆ, ಮಾನವೀಯತೆ ಎಂಬ ನಿಸ್ವಾರ್ಥ ಸೇವೆಗಳು ಜನಸಾಮಾನ್ಯರಿಗೆ ಹಂಚುತ್ತಾ, ಸಂಘಟನೆ, ಹೋರಾಟಗಳು ಕೈಗೊಳುತ್ತಾ ಜೊತೆ ಜೊತೆಯಲ್ಲಿ ಶೈಕ್ಷಣಿಕ,ಸಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿಭಾಗ ಸೇರಿದಂತೆ ವಿವಿಧ ಜನಪರ,ಸಾಹಿತ್ಯ, ಜಾನಪದ ಪರ ಸೇವಾ ಕೈಂಕರ್ಯಗಳು ಗೊ ರು ಚನ್ನಬಸಪ್ಪ ಶರಣರು ಸದ್ದುಗದಲ್ಲವಿಲದೆ ಮಾಡುತ್ತಿದ್ದಾರೆ.  ಹೀಗಾಗಿಯೇ ಇಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಈ ದೇಶದ ಪ್ರಮುಖ  ಪರಿಷತ್ತುಗಳಲ್ಲಿ ಅಗ್ರಗಣ್ಯ ಪರಿಷತ್ತಾಗಿ ಹೊರಹೊಮ್ಮುತ್ತಿದೆ ಮತ್ತು ಬೆಳಗುತ್ತಿದೆ. ಹೀಗಾಗಿ ಈ ದಿಸೆಯಲ್ಲಿ ಶರಣರ ವಿಚಾರ ಧಾರೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸಿಕೊಂಡು ಮತ್ತು ಹೊತ್ತುಕೊಂಡು ಶರಣ ಸಾಹಿತ್ಯ ಪರಿಷತ್ತು ಸಾಗುತ್ತಿದೆ ಎಂದು ಘಂಟಾ ಘೋಷವಾಗಿ ಹೇಳಬಹುದು. ಇದರ ಸಂಪೂರ್ಣ ಶ್ರೇಯಸ್ಸು ಗೊ ರು  ಚನ್ನಬಸಪ್ಪ ಶರಣರಿಗೆ ಸಲ್ಲುತ್ತದೆ. ಆದಕಾರಣ ಇಂದು ಶರಣ  ಸಾಹಿತ್ಯ ಪರಿಷತ್ತು ವಿಶ್ವ ಖ್ಯಾತಿಯನ್ನು ಪಡೆದುಕೊಂಡಿದೆ. ಆದ್ದರಿಂದ ಈ ಎಲ್ಲಾ ನಿಸ್ವಾರ್ಥ ಸೇವೆಗಳ ಹಿನ್ನೆಲೆಯಲ್ಲಿ ಗೊ ರು ಚನ್ನಬಸಪ್ಪ ಶರಣರನ್ನು ಭಾರತ ಸರಕಾರ ಸೇರಿದಂತೆ ವಿಶ್ವ ಸಂಸ್ಥೆ, ವಿಶ್ವ ಸಮುದಾಯವು ಗೌರವಿಸಬೇಕು, ಗೌರವಿಸುವುದು ಸರಕಾರದ ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಸಂಗಮೇಶ ಎನ್ ಜವಾದಿ. ಬರಹಗಾರ, ಪರಿಸರ ಸಂರಕ್ಷಕ ಹಾಗೂ ತಾಲ್ಲೂಕಾಧ್ಯಕ್ಷರು : ಶರಣ ಸಾಹಿತ್ಯ ಪರಿಷತ್ತು, ಚಿಟಗುಪ್ಪ ತಾಲೂಕು ಬೀದರ ಜಿಲ್ಲೆ.,9663809340.

Leave a Reply

Your email address will not be published. Required fields are marked *