ಚಿಟಗುಪ್ಪ ನಗರದಲ್ಲಿ ಆರ್ಯ ಸಮಾಜದಲ್ಲಿ ಸಸಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು…

Spread the love

ಚಿಟಗುಪ್ಪ ನಗರದಲ್ಲಿ ಆರ್ಯ ಸಮಾಜದಲ್ಲಿ ಸಸಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು…

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ಚಿಟಗುಪ್ಪ ತಾಲೂಕು ವಿಕಾಸ್ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಇಂದು ಚಿಟಗುಪ್ಪ ನಗರದಲ್ಲಿ ಆರ್ಯ ಸಮಾಜದಲ್ಲಿ ಸಸಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತ್ತು.  ಇದೆ ಸಂದರ್ಭದಲ್ಲಿ ವಿಕಾಸ್ ಅಕಾಡೆಮಿಯ ಹಾಗೂ ಸಲಹಾ ಸಮಿತಿಯ ಸದಸ್ಯರುಗಳಿಂದ ರೈತ ಬಂಧುಗಳಿಗೆ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಾಸ್ ಅಕಾಡೆಮಿಯ ಅಧ್ಯಕ್ಷರಾದ ಶಿವಾನಂದ ಮಂಠಾಳ್ಕರ್, ತಾಲೂಕು ವಿಕಾಸ್ ಅಕಾಡೆಮಿಯ ಅಧ್ಯಕ್ಷರಾದ ಸೂರ್ಯಕಾಂತ,ಸಲಹಾ ಸಮಿತಿಯ ಸದಸ್ಯರಾದ ತಿಪ್ಪಣ್ಣಾ ಶರ್ಮಾ, ದಯಾನಂದ ಕಾಂಬ್ಳೆ,ಎನ್ ಎಸ್ ಮಲ್ಲಶೆಟ್ಟಿ, ವಿಕಾಸ್ ಅಕಾಡೆಮಿ ತಾಲೂಕು ಸಂಚಾಲಕರು ಹಾಗೂ ಸಂಯೋಜಕರಾದ ಸಂಗಮೇಶ ಎನ್ ಜವಾದಿ ಹಾಗೂ  ಸಹ ಸಂಚಾಲಕ ತುಕರಾಮ ಅಂಬೆಗಾರರು ಸೇರಿದಂತೆ  ಗಣ್ಯರು,ರೈತ ಬಂಧುಗಳು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *