ಮನೆ ಕುಸಿದು ಮೃತಪಟ್ಟಿರುವ ಗೃಹಿಣಿ ಅವಲಂಬಿತರಿಗೆ ₹ 5ಲಕ್ಷದ ಪರಿಹಾರ ಚೆಕ್ ವಿತರಿಸಿದ ಶಾಸಕ ರಾಜಶೇಖರ ಬಿ.ಪಾಟೀಲ….

Spread the love

ಮನೆ ಕುಸಿದು ಮೃತಪಟ್ಟಿರುವ ಗೃಹಿಣಿ ಅವಲಂಬಿತರಿಗೆ ₹ 5ಲಕ್ಷದ ಪರಿಹಾರ ಚೆಕ್ ವಿತರಿಸಿದ ಶಾಸಕ ರಾಜಶೇಖರ ಬಿ.ಪಾಟೀಲ…..

ಬೀದರ್: ನಿರಂತರ ಮಳೆಯಿಂದ ಮನೆ ಕುಸಿದು ಮೃತಪಟ್ಟ ಜಿಲ್ಲೆಯ ಹುಮನಾಬಾದ್ ತಾಲ್ಲೂಕು ಕುಮಾರಚಿಂಚೋಳಿ ಗ್ರಾಮದ ಪಾರ್ವತಿ ವೈಜಿನಾಥ ವಾಡೇಕರ್ ಅವರ ಅವಲಂಬಿತರಿಗೆ ಸರ್ಕಾರ ಪ್ರಕೃತಿವಿಕೋಪ ಅಡಿಯಲ್ಲಿ ಬಿಡುಗಡೆ ಮಾಡಿಸಲಾದ ₹4ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ₹1ಲಕ್ಷ ಸೇರಿ ಒಟ್ಟು ₹5ಲಕ್ಷ  ಪರಿಹಾರ ಚೆಕ್ ವಿತರಣೆ ಜೊತೆಗೆ ಶಾಸಕ ರಾಜಶೇಖರ ಬಿ.ಪಾಟೀಲ ಅವರು ವಯಕ್ತಿಕವಾಗಿ ₹50ಸಾವಿರ ನಗದು ಪರಿಹಾರ ನೀಡಿದರು. ಮೃತರ ಮಕ್ಕಳಿಗೆ ತಮ್ಮ ವಿದ್ಯಾ ಸಂಸ್ಥೆಯಲ್ಲಿ ಉಚಿತವಾಗಿ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.  ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ್, ತಾಲ್ಲೂಕು ಪಂಚಾಯಿತಿ ಕಾರ್ಯನುರ್ವಾಹಕ ಅಧಿಕಾರಿ ಡಾ.ಗೋವಿಂದ ಮತ್ತಿತರರು ಇದ್ದರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *