ಸರಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವರು ನೋಡಲೇಬೇಕಾದ ಸ್ಟೋರಿ…ಮರುಜೀವ ನೀಡಿದ ಸರಕಾರಿ ವೈದ್ಯರು…..

Spread the love

ಸರಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವರು ನೋಡಲೇಬೇಕಾದ ಸ್ಟೋರಿಮರುಜೀವ ನೀಡಿದ ಸರಕಾರಿ ವೈದ್ಯರು……

:ಸರ್ಕಾರಿ ಆಸ್ಪತ್ರೆ ಎಂದರೆ ಸಾಕು ಮೂಗು ಮುರಿದು ಅಸಡ್ಡೆ ತೋರುವವರೆ ಹೆಚ್ಚು. ಇದರ ಮಧ್ಯೆ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮಾತ್ರ ಮಾದರಿ ಕೆಲಸ ಮಾಡುತ್ತಿದ್ದೆ. ಜಿಲ್ಲಾಸ್ಪತ್ರೆ ಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಧಿಗಿಂತ ಮುಂಚೆ ಹಾಗೂ ಕಡಿಮೆ ತೂಕದ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಅವಧಿ ಪೂರ್ವ ಹಾಗೂ ಅತ್ಯಂತ ಕಡಿಮೆ ತೂಕ ಉಳ್ಳ ಶಿಶುಗಳು ಜನಿಸಿದ್ರೆ ಬದುಕುಳಿ ಯೋದು ತುಂಬಾ ವಿರಳ. ಅಂತಹದ್ದರಲ್ಲಿ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಜನಿಸಿದ ಹೆಣ್ಣು ಮಗುವಿನ ಆಯಸ್ಸು ಗಟ್ಟಿಯಾಗಿದೆ. ಗ್ರಾಮದ ಬಸಮ್ಮ-ಮಾಂತೇಶ ನಾಯ್ಕೋಡಿ ದಂಪತಿಯ ಮೊದಲ ಮಗು ಜೂನ್ 15 ರಂದು ಮನೆಯಲ್ಲೇ ಜನಿಸಿತ್ತು. ಏಳು ತಿಂಗಳಿಗೆ ಜನಿಸಿದ ಈ ಮಗುವಿನ ತೂಕ ಇದ್ದದ್ದು ಕೇವಲ 575 ಗ್ರಾಂ. ಅವಧಿಗೂ ಮುನ್ನ ಹಾಗೂ ಒಂದು ಕೆಜಿ ಒಳಗಿನ ತೂಕ ಉಳ್ಳ ಮಕ್ಕಳು ಹೆಚ್ಚಾಗಿ ಬದುಕೋದೇ ಇಲ್ಲವಂತೆ. ಹಾಗಿದ್ದೂ ಸಹ ಮನೆಯಲ್ಲಿ ಹುಟ್ಟಿದ ಈ ಮಗು ಅತ್ಯಂತ ಕಡಿಮೆ ತೂಕ ಹೊಂದಿದ್ದು, ಬದುಕುವ ದು ಕಡಿಮೆ ಇದ್ದುದ ರಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿನ ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ SNCU (special newborn care unit) ನಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಈ ನವಜಾತ ಶಿಶು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಈ ಮೊದಲು ಮುದ್ದೇಬಿಹಾಳ ತಾಲೂಕಿನ ಭಂಟನೂರ ಗ್ರಾಮದ ಸುನಿತಾ- ಸಂತೋಷ ಚಿಮ್ಮಲಗಿ ಎಂಬ ದಂಪತಿಗೂ ಕೇವಲ 800 ಗ್ರಾಂ ತೂಕ ಉಳ್ಳ ಹೆಣ್ಣು ಮಗುವೊಂದು ಜನಿಸಿತ್ತು. ಏಪ್ರೀಲ್ 15ರಂದು ಜನಿಸಿದ್ದ ಈ ಮಗುವಿಗೆ ಕಳೆದ ಎರಡು ತಿಂಗಳಿನಿಂದ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರದಲ್ಲೇ ಆರೈಕೆ ಮಾಡುತ್ತಿದ್ದು, ಮಗು ಚೇತರಿಸಿಕೊಂಡಿದ್ದು ಇದೀಗ 1200 ಗ್ರಾಂ ತೂಕ ಹೊಂದಿ ಆರೋಗ್ಯವಾಗಿದೆ. ಅದಾದ ಬಳಿಕ ಬಸಮ್ಮಳಿಗೆ ಇದೇ ಮೊದಲ ಹೆರಿಗೆ ಇದ್ದು, ಏಳು ತಿಂಗಳ ಗರ್ಭಿಣಿ ಇರುವಾಗಲೇ ಆಕಸ್ಮಿಕವಾಗಿ ಮನೆಯಲ್ಲೇ ಹೆರಿಗೆಯಾಗಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅರ್ಧ ಕೆಜಿ ತೂಕದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಬದುಕಿಸಿ ಕೊಡುವ ಭರವಸೆ ನೀಡಿರುವ ವೈದ್ಯರ ತಂಡಕ್ಕೆ ತಾಯಿ ಧನ್ಯವಾದ ತಿಳಿಸಿದ್ದಾರೆ. : ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಶರಣಪ್ಪ ಕಟ್ಟಿ, ನವಜಾತು ಶಿಶುಗಳ ತಜ್ಞೆ ಡಾ. ಲಕ್ಷ್ಮೀ ಹಡಲಗಿ ಹಾಗೂ ಶುಶ್ರೂಷಕಿಯರ ಶ್ರಮದಿಂದ ಇಂದು ಅನೇಕ ಬಡ ರೋಗಿಗಳಿಗೆ ಅನುಕೂಲವಾಗಿದೆ. ಜಿಲ್ಲಾ ಆಸ್ಪತ್ರೆ ಎಂದರೆ ಮೂಗು ಮೂರಿಯು ವವರ ಮಧ್ಯೆ ಇಂತಹ ವಿರಳ ಪ್ರಕರಣಗಳೆ ರಡನ್ನು ಇಲ್ಲಿನ ವೈದ್ಯರು ಸವಾಲಾಗಿ ಸ್ವೀಕರಿಸಿ ಎರಡು ನವಜಾತ ಹೆಣ್ಣು ಶಿಶುಗಳಿಗೆ ಜೀವದಾತ ರಾಗಿದ್ದಾರೆ. ಇದ್ದ ಸೌಲಭ್ಯಗಳಲ್ಲೇ ಶಕ್ತಿ ಮೀರಿ ಚಿಕಿತ್ಸೆ ನೀಡಿ ಬದುಕುಳಿಸಿದ ವೈದ್ಯರು ಹಾಗೂ ಅವರ ತಂಡಕ್ಕೆ ಶಹಬ್ಬಾಶ್ ಹೇಳಲೇಬೇಕು.

ವರದಿ – ಪ್ರವೀಣ ನಂದಿ ವಿಜಯಪೂರ

Leave a Reply

Your email address will not be published. Required fields are marked *