ನಾಡಪ್ರಭು, ಪರಿಸರ ಪ್ರೇಮಿ, ಸರ್ವಧರ್ಮ ರಕ್ಷಕ, ದೂರದರ್ಶಿತ್ವ ಹೊಂದಿದ್ದ ಅದ್ವಿತೀಯ ನಾಯಕರಾದ ಧರ್ಮಪ್ರಭು ಕೆಂಪೇಗೌಡರ 512ನೇ ಜಯಂತ್ಯೋತ್ಸವವನ್ನು

Spread the love

ನಾಡಪ್ರಭು, ಪರಿಸರ ಪ್ರೇಮಿ, ಸರ್ವಧರ್ಮ ರಕ್ಷಕ, ದೂರದರ್ಶಿತ್ವ ಹೊಂದಿದ್ದ ಅದ್ವಿತೀಯ ನಾಯಕರಾದ ಧರ್ಮಪ್ರಭು ಕೆಂಪೇಗೌಡರ 512ನೇ ಜಯಂತ್ಯೋತ್ಸವವನ್ನು

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಎಸ್.ಅಂಬರೀಶ್, ಕೆ.ಎಸ್.ಪ್ರಭಾಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಮತ್ತು ಮನ್ ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ ಅವರು ಧರ್ಮಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಮಾತನಾಡಿ ಬೆಂಗಳೂರು ಮಹಾನಗರವನ್ನು ಕಟ್ಟಿ ವಿಶ್ವಮಟ್ಟದಲ್ಲಿ ಬೆಂಗಳೂರು ಪ್ರಖ್ಯಾತವಾಗಲು ಕಾರಣರಾದ ನಾಡಪ್ರಭು ಕೆಂಪೇಗೌಡರು ವಿಜಯನಗರದ ಅರಸರ ಸಾಮಂತರಾಜರಾಗಿದ್ದರೂ ದೂರದರ್ಶಿ ಚಿಂತನೆ, ಹಾಗೂ ಜನಪರವಾದ ಆಡಳಿತ ನಡೆಸಿ ನೂರಾರು ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಕಾರಣರಾದ ಕೆಂಪೇಗೌಡರು ನಮ್ಮೆಲ್ಲರ ಧೀಶಕ್ತಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ರವಿ, ತಾಲ್ಲೂಕು ಬಿಜೆಪಿ ಓಬಿಸಿ ಮೋರ್ಚಾಅಧ್ಯಕ್ಷ ಸಾರಂಗಿ ನಾಗರಾಜು, ಮಂಜುನಾಥಗೌಡ, ಕಾರಿಗನಹಳ್ಳಿ ಕುಮಾರ್, ಹೊಸೂರುಸ್ವಾಮಿಗೌಡ, ಬಿಬಾಚಹಳ್ಳಿ ವೆಂಕಟೇಶ್, ಅಗ್ರಹಾರಬಾಚಹಳ್ಳಿ ಕೇಶವ, ಶೀಳನೆರೆ ಭರತ್, ಭಾರತಿಪುರ ಪುಟ್ಟಣ್ಣ,ಸಚಿವರ ಆಪ್ತಸಹಾಯಕ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.  ವರದಿ.ಡಾ.ಕೆ.ಆರ್.ನೀಲಕಂಠ.

Leave a Reply

Your email address will not be published. Required fields are marked *