ಅಪೌಷ್ಟಿಕ ಮಕ್ಕಳ ಆರೈಕೆ ಹಾಗೂ ವಿಶೇಷಚೇತನರ ಹಿತಕ್ಕಾಗಿ ಸಕಲ ಕ್ರಮ..

Spread the love

ಅಪೌಷ್ಟಿಕ ಮಕ್ಕಳ ಆರೈಕೆ ಹಾಗೂ ವಿಶೇಷಚೇತನರ ಹಿತಕ್ಕಾಗಿ ಸಕಲ ಕ್ರಮ..

ಚಿತ್ರದುರ್ಗ ಇಂದು ಚಿತ್ರದುರ್ಗದಲ್ಲಿ, ನಮ್ಮ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ, ಫಲಾನುಭವಿ ವಿಶೇಷಚೇತನರಿಗೆ ಶ್ರವಣ ಸಾಧನ, ತ್ರಿಚಕ್ರ ಸೈಕಲ್, ವಾಟರ್ ಬೆಡ್ ಹಾಗೂ ಪ್ರೋತ್ಸಾಹ ಧನವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವಿತರಿಸಿದರು. ನಂತರ ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಲಡ್ಡು, ಪೌಷ್ಟಿಕ ರಾಗಿ ಮಾಲ್ಟ್ ವಿತರಣೆ ಮಾಡಿದರು. ಬಳಿಕ ಡಿಸಿಪಿಯು ಘಟಕದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಭಿಕ್ಷಾಟನೆ ನಿರ್ಮೂಲನೆ ಹಾಗೂ ಕೋವಿಡ್-19 ಗೆ ಸಂಬಂಧಿಸಿ ಮಕ್ಕಳು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.

ವರದಿ – ಮಹೇಶ ಶರ್ಮಾ  

Leave a Reply

Your email address will not be published. Required fields are marked *