ಕುಷ್ಟಗಿ: ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಇವರ ಅಭಿಮಾನ ಬಳಗದ ವತಿಯಿಂದ ಪೊಲೀಸರಿಗೆ ಹಾಗೂ ಬಡವರಿಗೆ ಆಹಾರ ವಿತರಣೆ.

Spread the love

ಕುಷ್ಟಗಿ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಇವರ ಅಭಿಮಾನ ಬಳಗದ ವತಿಯಿಂದ ಪೊಲೀಸರಿಗೆ ಹಾಗೂ ಬಡವರಿಗೆ ಆಹಾರ ವಿತರಣೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಶ್ರೀ ಅಮರೇಗೌಡ ಎಲ್ ಪಾಟೀಲ ಬಯ್ಯಾಪುರ  ಇವರ ಅಭಿಮಾನಿ ಬಳಗದ ವತಿಯಿಂದ ನಿನ್ನೆ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಹಾಗೂ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕರ್ತವ್ಯ ನಿರತ ಪೋಲಿಸರಿಗೆ ಮತ್ತು ಬಡವರಿಗೆ ಆಹಾರ ವಿತರಣೆ ಮಾಡಲಾಯಿತು .ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಗಳಾದ ಕೆ ಎಸ್ ರೆಡ್ಡಿ ಅವರು ಮಾತನಾಡಿ ಇಂದು ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಇವರ ಅಭಿಮಾನಿ ಬಳಗದವತಿಯಿಂದ ಹಾಗೂ ಮದುವೆ ವಾರ್ಷಿಕೋತ್ಸವದ ನಿಮಿತ್ಯ ಪೋಲಿಸರಿಗೆ, ಗ್ರಹ ರಕ್ಷಕದಳ ಸಿಬ್ಬಂದಿಗೆ ಮತ್ತು ಬಡವರಿಗೆ ಆಹಾರ ವಿತರಣೆ ಮಾಡುವಂತದ್ದು ಸಂತೋಷದ ಸಂಗತಿ ಎಂದರು. ನಂತರ ನಿಜಾಮ್ ಕಪಾಲಿ ಮಾತನಾಡಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಪ್ರತಿ ಹಳ್ಳಿಗೆ ತರಳಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಕೊರೋನಾ ವಿರುದ್ಧ ಹೋರಾಟ ನೆಡೆಸಿದ್ದಾರೆ ಮತ್ತು ವಿಶ್ವ ಆರೋಗ್ಯ ದಿನಾಚರಣೆ ಮತ್ತು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರ ಮದುವೆ ವಾರ್ಷಿಕೋತ್ಸವದ ಅಂಗವಾಗಿ ಇವತ್ತು ಶಾಸಕರ ಅಭಿಮಾನಿಗಳು ಸೇರಿ ಬಡವರಿಗೆ ಹಾಗೂ ಪೋಲಿಸರಿಗೆ ಆಹಾರ ವಿತರಣೆ ಮಾಡಲಾಗಿದೆ ಎಂದು‌ ಹೇಳಿದರು. ಈ ಸಂದರ್ಭದಲ್ಲಿ ಕುಷ್ಟಗಿ ಪೋಲಿಸ್ ಠಾಣೆ ಪಿ ಎಸ್ ಐ ತಿಮ್ಮಣ್ಣ ನಾಯಕ್, ಶಾಂತರಾಜ್ ಗೂಗಿ. ಅಂಬರೀಶ್ ಮುದೇನೂರು . ಶಿವು ಹೊಸಪೇಟೆ . ಎಂ ಡಿ ಯೂಸುಫ್ ಸೇರಿದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅಭಿಮಾನಿ ಬಳಗ ದವರು ಉಪಸ್ಥಿತರಿದ್ದರು .

  ವರದಿ – ಮಂಜುನಾಥ ಎಸ್.ಕೆ.

2 thoughts on “ಕುಷ್ಟಗಿ: ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಇವರ ಅಭಿಮಾನ ಬಳಗದ ವತಿಯಿಂದ ಪೊಲೀಸರಿಗೆ ಹಾಗೂ ಬಡವರಿಗೆ ಆಹಾರ ವಿತರಣೆ.

Leave a Reply

Your email address will not be published. Required fields are marked *