ತಹಶೀಲ್ದಾರ್ ಮತ್ತು ಸಿಪಿಐ ನೇತೃತ್ವದಲ್ಲಿ 3ನೇ ದಿನಕ್ಕೆ ಮುಕ್ತಾಯಗೊಂಡ ಉಪವಾಸ ಸತ್ಯಾಗ್ರಹ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಸಂಘಟನೆಗಳಿಂದ ನಡೆದ ಉಪವಾಸ ಸತ್ಯಾಗ್ರಹವು ಇಂದು ಮುಕ್ತಾಯಗೊಂಡಿತು.
ವಿವರಣೆ :-
1) ತಾವರಗೇರಾ ಪಟ್ಟಣದ ನಾನಾ ಕಡೆಗೆ ಇರುವ ಸರ್ಕಾರಿ ಜಮೀನುಗಳಲ್ಲಿ ಅಕ್ರಮದಾರರು ತಮ್ಮ ಸ್ವಂತಹ ಜಮೀನಿನಂತೆ ಆ ಸ್ಥಳದಲ್ಲಿ ತಗಡಿನ ಶೇಡ್ದುಗಳನ್ನ ಮತ್ತು ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿಕೊಂಡು ಬಡು ಬಗ್ಗರಿಗೆ ಬಾಡಿಗೆ ನೀಡಿದ್ದಾರೆ.
2) ಪಟ್ಟಣದ ಸರ್ವೇ ನಂ 51 ರಲ್ಲಿ ಸರ್ಕಾರಿ ದರ್ಗಾ ಮಾಫಿಯಾ ಜಮೀನು ಇದ್ದು. ಈ ಜಮೀನಿನಲ್ಲಿ 1988 ರ ಸುಮಾರಿಗೆ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರ ಇವರು ಸುಮಾರು 17 ಜನರಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಿದ್ದು ಸತ್ಯ. ಆದರೆ ಸದ್ಯ ಈ ಸ್ಥಳದಲ್ಲಿ ಸುಮಾರು 30 ರಿಂದ 35 ತಗಡಿನ ಶೇಡ್ಡು ಮತ್ತು ವಾಣಿಜ್ಯ ಮಳಿಗೆಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕು. ಆ ಸರ್ಕಾರದ ಆಸ್ತಿಯನ್ನ ತಮ್ಮ ವ್ಯಾಪ್ತಿಗೆ ತಗೆದುಕೊಳ್ಳಬೇಕು.
3) ಪಟ್ಟಣದ ಸರ್ವೇ ನಂ 54 ರಲ್ಲಿ ಸರ್ಕಾರಿ ಗಾಯರಣ ಜಮೀನು ಇದ್ದು. ಈ ಜಮೀನಿನಲ್ಲಿ ಸಾಕಷ್ಟು ಜನರು ಅಕ್ರಮಿಸಿಕೊಂಡಿರುತ್ತಾರೆ ಕೂಡಲೆ ಸಂಪೂರ್ಣ ತನಿಖೆ ಕೈಗೊಂಡು. ಉಳಿದ ಸರ್ಕಾರಿ ಆಸ್ತಿಯನ್ನ ತಮ್ಮ ವ್ಯಾಪ್ತಿಗೆ ತಗೆದುಕೊಳ್ಳಬೇಕು.
4) ಪಟ್ಟಣದ ಸಿಂಧನೂರು ಸರ್ಕಲ್ ನಲ್ಲಿರುವ ಮೂಲ ಗೌವಟಾಣ ಜಮೀನಿನಲ್ಲಿ ಅಕ್ರಮಿಸಿಕೊಂಡವರಿಂದ ಜಮೀನು ತಗೆದುಕೊಂಡು ಮುಂದಿನ ಪೀಳಿಗೆಗೆ ಮೀಸಲಿಡಬೇಕು.
5) ಪಟ್ಟಣದ ರಾಜ ಕಾಲುವೆ ಯಲ್ಲಿ ಸುಮಾರು 26 ಭೂ ಮಾಲೀಕರಿಗೆ ಈಗಾಗಲೇ ಪರಿಹಾರ್ ದೊರೆಕಿದ್ದು. ಆದರೆ ಈ ಭೂ ಮಾಲೀಕರು ರಾಜ್ ಕಾಲುವೆಯನ್ನ ಮುಚ್ಚಿ ಆ ಸ್ಥಳದಲ್ಲಿ ಎನ್ ಎ ಪ್ಲಾಟ್ ಗಳನ್ನ ನಿರ್ಮಿಸಿ ಮಾರಾಟ ಮಾಡಿರುತ್ತಾರೆ. ಕೂಡಲೆ ಭೂ ಮಾಲೀಕರಿಂದ ರಾಜ ಕಾಲುವೆ ಜಮೀನನ್ನ ತಮ್ಮ ವ್ಯಾಪ್ತಿಗೆ ತಗೆದುಕೊಂಡು. ಪುನಃಹ ರಾಜ್ ಕಾಲುವೆ ನಿರ್ಮಿಸಬೇಕು.
6) ದೊಡ್ಡ ದರ್ಗಾದ ಹತ್ತಿರ ಇರುವ ಪಂಚಾಯತ್ ಮಳಿಗೆಗಳಲ್ಲಿ ಒಂದು ಮಳಿಗೆ ದುರ್ಬಳಿಕೆ ಮಾಡಿಕೊಂಡಿರುತ್ತಾರೆ. ಕೂಡಲೆ ಆ ಮಳಿಗೆಯನ್ನ ತಮ್ಮ ವ್ಯಾಪ್ತಿಗೆ ತಗೆದುಕೊಳ್ಳಬೇಕು.
7) ಪಾತಪ್ಪನ ಕಟ್ಟಿಯಿಂದ ನೇರವಾಗಿ ಪೊಲೀಸ್ ಠಾಣೆವರೆಗೆ 40 ಅಡಿ ರಸ್ತೆ ಅಗಲೀಕರಣ ಆಗಬೇಕು.
ಇದೇತರ ಇನ್ನಿತರ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಸುಮಾರು 3 ದಿನಗಳಿಂದ ಈ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ಹೋರಾಟದ ಇನ್ನಲೆಯಾಗಿ ಮಾನ್ಯತಹಶೀಲ್ದಾರ ಸಾಹೇಬರು 3ನೇ ದಿನಕ್ಕೆ ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ಮನಹೋಲಿಸಿ ಕೊನೆಗೂ ಹೋರಾಟಗಾರರ ಬೇಡಿಕೆಗಳಿಗೆ ಸೂಕ್ತ ನ್ಯಾಯ ಒದಗಿಸುತ್ತೇವೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಸಿ.ಪಿ.ಐ.ಸಾಹೇಬರು ಹಾಗೂ ಪಿ.ಸೆ್.ಐ.ಸಾಹೇಬರು ಜೊತೆಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ಹಾಗೂ ಸರ್ವ ಸಿಬ್ಬಂದಿಗಳು ಮತ್ತು ನಾಡ ಕಚೇರಿಯ ಅದಿಕಾರಿಗಳು ಪಾಲುಗೊಂಡಿದ್ದರು. ಜೊತೆಗೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿದ ಸಂಘಟನೆಯ ಮುಖಂಡರು ಭಾಗಿಯಾಗಿ ಈ ಹೋರಾಟವನ್ನ ಯಶಸ್ವಿಗೋಳಿಸಿದರು.
ವರದಿ :- ಸಂಪಾದಕೀಯ