ಸಜ್ಜಲಗುಡ್ಡದ ಶ್ರೀಮಠದಿಂದ ಗುಡದೂರು ಜಾತ್ರೆಗೆ ಚಕ್ಕಡಿ ಯಾತ್ರೆ,ಸ್ವಾಗತಿಸಿದ ಮುದೇನೂರ ಗ್ರಾಮಸ್ಥರು…

Spread the love

ಮುದೇನೂರ: ಮಾರ್ಚ್ 16ರಂದು ಅಂದರೆ ಇಂದು ಸುಕ್ಷೇತ್ರ ಗುಡದೂರಿನ ಲಿಂಗೈಕ್ಯ ದೊಡ್ಡಬಸವ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಜ್ಜಲಗುಡ್ಡ ಕಂಬಳಿಹಾಳದ ಶ್ರೀಮಠದಿಂದ ಶರಣಮ್ಮ ತಾಯಿಯವರ ಭಾವಚಿತ್ರದ ಚಕ್ಕಡಿ ಯಾತ್ರೆ ನಡೆಯಿತು.ಸಜ್ಜಲಗುಡ್ಡದ ಪೂಜ್ಯರಾದ ಶ್ರೀ ದೊಡ್ಡಬಸವಾರ್ಯ ತಾತನವರು, ಅಮ್ಮನವರು ಚಕ್ಕಡಿಯಲ್ಲಿ ಕುಳಿತು ಗುಡದೂರಿನವರೆಗೆ ಯಾತ್ರೆ ನಡೆಸಿದರು. ದಾರಿ ಇದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಪೂಜ್ಯರಿಗೆ ಹಾಗೂ ಪಾದಯಾತ್ರೆಗಳಿಗೆ ಭವ್ಯ ಸ್ವಾಗತ ನೀಡಿದರು. ಮುದೇನೂರ ಗ್ರಾಮಕ್ಕೆ ಆಗಮಿಸಿದಾಗ ಚಕ್ಕಡಿಯಾತ್ರೆಗೆ ಪೂಜೆ ಸಲ್ಲಿಸಿ ಭವ್ಯ ಸ್ವಾಗತ ನೀಡಿದರು.ಪಾದಯಾತ್ರೆ ಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ

Leave a Reply

Your email address will not be published. Required fields are marked *