ಮುದೇನೂರಲ್ಲಿ ತ್ರಿಪದಿ ಕವಿ ಸರ್ವಜ್ಞರ ಜಯಂತ್ಯೋತ್ಸವ ಆಚರಣೆ,

Spread the love

ಮುದೇನೂರ,ಫೆ,20; ತ್ರಿಪದಿ ಕವಿ ಸರ್ವಜ್ಞರ ಜಯಂತ್ಯೋತ್ಸವ ಅಂಗವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಮಂಗಳವಾರ ಬೆಳಗ್ಗೆ ಇಲ್ಲಿನ ಮುದೇನೂರ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ವಿಶೇಷ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಹುಸೇನಪ್ಪ ಹಿರೇಮನಿ, ಗ್ರಾಮದ ಹಿರಿಯ ಮುಖಂಡರಾದ ಮಂಜುನಾಥ ಸ್ವಾಮಿ ಹಿರೇಮಠ, ಪತ್ರಕರ್ತ ಚಂದ್ರಶೇಖರ ಕುಂಬಾರ, ಬಿಲ್ ಕಲೆಕ್ಟರ್ ಮಹಾಂತೇಶ ಹಾವಿನಾಳ, ಕಂಪ್ಯೂಟರ್ ಆಪರೇಟರ್ ನಿಂಗಯ್ಯಸ್ವಾಮಿ ಹಿರೇಮಠ, ಬಸಯ್ಯಸ್ವಾಮಿ ಜುಮಲಾಪೂರ, ಮುತ್ತು ನಡುಲಮನಿ ಉಪಸ್ಥಿತರಿದ್ದರು. ಮುದೇನೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಮಾದರಿ ಹಿರಿಯ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ಶಶಿಧರ ಸ್ವಾಮಿ ಪ್ರೌಢ ಶಾಲೆ, ವಿ.ಎಸ್.ಎಸ್.ಎನ್ ಸೊಸೈಟಿಗಳಲ್ಲಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ವಿಶೇಷ ಸಲ್ಲಿಸಿದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರು.

Leave a Reply

Your email address will not be published. Required fields are marked *