ಇಂದು ತಾವರಗರಾ ಪಟ್ಟಣ 5 ನೇ ದಿನಕ್ಕೆ ಸಂಪೂರ್ಣ ಲಾಕ್  ಒಂದು ಕಡೆ, ಬೆಳಗಿನ ಜಾವ್ ಕದ್ದು ಮುಚ್ಚಿ ವ್ಯವಹಾರ ಮಾಡುವವರು ಮತ್ತೊಂದು ಕಡೆ?

Spread the love

ಇಂದು ತಾವರಗರಾ ಪಟ್ಟಣ 5 ನೇ ದಿನಕ್ಕೆ ಸಂಪೂರ್ಣ ಲಾಕ್  ಒಂದು ಕಡೆ, ಬೆಳಗಿನ ಜಾವ್ ಕದ್ದು ಮುಚ್ಚಿ ವ್ಯವಹಾರ ಮಾಡುವವರು ಮತ್ತೊಂದು ಕಡೆ?

ಕರ್ನಾಟಕ ರಾಜ್ಯಾ ಸರ್ಕಾರ ಹೋರಡಿಸಿರುವ ಲಾಕಡೌನ್ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಂದು  5 ನೇ ದಿನಕ್ಕೆ ಸಂಪೂರ್ಣ ಲಾಕ್ ಡೌನ್ ನಿಮಿತ್ಯ. ನಿನ್ನೆ ಹೇಳಿದ ಹಾಗೆ ಇಂದು ಸಹ ಬೆಳಗಿನ ಜಾವ್ 5 ಗಂಟೆಯಿಂದ ಕಿರಾಣಿ ಅಂಗಡಿಯವರು ಹಾಗೂ ಬಟ್ಟೆ ಅಂಗಡಿ ಮಾಲೀಕರು ಖದ್ದು/ಮುಚ್ಚಿ ವ್ಯವಹಾರ ಮಾಡುತ್ತಿರುವ ದೃಶ್ಯ ಕಂಡು ಬಂತ್ತು,  ಹಳ್ಳಿ ಹಳ್ಳಿಯಿಂದ ಜನರು ತಾವರಗೇರಾ ಪಟ್ಟಣಕ್ಕೆ ಬೈಕ್,ಆಟೋ ತಗೆದುಕೊಂಡು ಬಂದು. ವ್ಯವಹಾರ ಮಾಡಿಕೊಂಡು ತಮ್ಮ ಊರಿನತ್ತ ಸಾಗುತ್ಇದ್ದಾರೆ.   ಸದ್ಯ ಸರ್ಕಾರವು ತಗೆದುಕೊಂಡ ನಿರ್ಣಯಕ್ಕೆ ಸಾರ್ವಜನಿಕರು ಸ್ಪಂಧಿಸದೆ ಹೋದಲ್ಲಿ ನಾಳೆ ದಿನ ಅನುಭವಿಸುವುದು ನಾವೇ ವರತು. ಬೇರೆ ಯರು ಅಲ್ಲ. ಜನರ ಅಳಿವು / ಉಳಿವಿಗಾಗಿ ಸರ್ಕಾರವು ನಾನಾ ರೀತಿಯ ಲಾಕ್ ಡೌನ್ ಕ್ರಮ ಕೈಗೊಂಡಿರುವ ಪ್ರಯತ್ನ ಒಂದು ಕಡೆ ವ್ಯರ್ಥ, ಯಾಕೆಂದರೆ ಸರ್ಕಾರವು ತೆಗೆದುಕೊಂಡ ನಿರ್ಣಯ ನಮ್ಮೆಲ್ಲರ ಒಳಿತುಗಾಗಿ ಅನ್ನುವ ಪ್ರಜ್ಞೆಯನ್ನು ಕಳೆದುಕೊಂಡಿದ್ದೆವೆ. ಹಾಗಾಗಿ ಬೆಳಗಾದರೆ ಸಾಕು ರಸ್ತೆಗೆ ಇಳಿಯುತ್ತೇವೆ. ಪ್ರತಿದಿನ ಈ ಲಾಕ್ ಡೌನ್ ನಿಮಿತ್ಯವಾಗಿ ಪೊಲೀಸರು ಅಥವಾ ಗೃಹ ರಕ್ಷಕ ಧಳದವರು ರಸ್ತೆಗೆ ಇಳಿದು ಎಚ್ಚರಿಸಬೇಕು ಅಂದರೆ ಹೇಗೆ ಸಾದ್ಯ. ಈ ಲಾಕ್ ಡೌನ್ ಬೆಳಗಿ 06 ಘಂಟೆಯಿಂದ ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ಧಳದವರು ರಸ್ತೆಗೆ ಇಳಿದರು. ಬೇಕಾಬಿಟ್ಟಿಯಾಗಿ ತಿರುಗಾಡುವವರನ್ನು ಪೋಲೀಸರು ದಂಡ ಹಾಕುವ ಮೂಲಕ ಎಚ್ಚರಿಕೆಯ ಗಂಟೆ ನೀಡಿದರು. ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ, ಡಾ..ಅಂಬೇಡ್ಕರ್ ನಗರ, ಶ್ರೀ ಬಸವೇಶ್ವರ ನಗರ, ಶ್ರೀ ಶ್ಯಾಮೀದಲಿ ಸರ್ಕಲ್, ಹಾಗೂ ಗಾಂಧಿ ಚೌಕ್, ಐ.ಬಿ. ಸರ್ಕಲ್, ಡಾ.ರಾಜಕುಮಾರ (ಮಾರ್ಕೇಟ್) ರಸ್ತೆ, ಈ ಮೊದಲಾದ ಜನಜಂಗುಳ್ಳಿಯ ನಗರ ಹಾಗೂ ಸರ್ಕಲ್ ನಲ್ಲಿ ರಣ ರಣ (ಬೀಕೊ) ಎನ್ನುವ ದೃಶ್ಯ ಕಂಡು ಬಂತ್ತು, ನಿನ್ನೆ ಮಳೆ/ಗಾಳಿ ಬಂದಾಗ್ಯೂ ಸಹ ಪೊಲೀಸರು ಹಾಗೂ ಗೃಹ ರಕ್ಷಕ ಧಳದವರು ನಿಷ್ಠೆಯಿಂದ ರಾತ್ರಿಯವರೆಗೂ ಕಾರ್ಯ ಮಾಡುತ್ತಿರುವ ದೃಶ್ಯ ಕಂಡು ಬಂತ್ತು, ನಿಜಕ್ಕೂ ಹೆಮ್ಮೇಯಿಂದ ಹೇಳಬೇಕು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ಧಳದ ಕಾರ್ಯ ಶ್ಲಾಘನೀಯವಾದದ್ದು, ತಮ್ಮ ಜೀವದ ಹಂಗ್ಗು ತೋರೆದು ಸಾರ್ವಜನೀಕರ ಹೀತಕ್ಕಾಗಿ/ ತಮ್ಮ ಕುಟುಂಬದ ಸಾವಿರಾರು ಕನಸ್ಸುಗಳನ್ನು ಬದಿಗಿಟ್ಟು ಈ ಕರೋನದ ವಿರುದ್ದ ನಮ್ಮ/ನಿಮ್ಮೆಲ್ಲರಗಾಗಿ ಸೇವೆ ಸಲ್ಲಿಸುವವರು ಅಂದರೆ ಅದು ಈ ಇಲಾಖೆಯಿಂದ ಮಾತ್ರ ಸಾಧ್ಯ. ಒಟ್ಗನಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ನಗರ ಹಾಗೂ ಸರ್ಕಲ್ ನಲ್ಲಿ ಬಿಗು ಬಂದೋಬಸ್ತುವಿನ ವಾತವರಣ ಕಂಡು ಬಂತ್ತು. ದಿನದಿಂದ ದಿನಕ್ಕೆ ಕೋರೋನದ ವಿರುದ್ದ ಹೋರಾಟ ಮಾಡಿ ಸಾವಿನ ಮೇಲೆ ಸಾವುಗಳು ಸಂಭವಿಸುವ ದೃಶ್ಯಗಳು ಕಣ್ಣಿಗೆ ಕಾಣುತ್ತಿದ್ದರು ನಾವುಗಳು ಎಚ್ಚೆತ್ತುಕೊಳ್ಳದೆ ಬೇಕಾಬಿಟ್ಟಿಯಾಗಿ ಅಲೆದಾಡುತ್ತಿರುವುದನ್ನು ಬಿಟ್ಟು ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ನಿಮ್ಮೆಲ್ಲರ ಆರೋಗ್ಯಕ್ಕಾಗಿ ಸರ್ಕಾರ ಕೈಗೊಂಡ ನಿರ್ಣಾಯಕ್ಕೆ ನಾವುಗಳು ಕೈ ಜೋಡಿಸಬೇಕಾಗಿದೆ.

ವರದಿ – ಮಂಜುನಾಥ ಎಸ್.ಕೆ

Leave a Reply

Your email address will not be published. Required fields are marked *