ಸಂಗೊಳ್ಳಿ ರಾಯಣ್ಣ ಕನ್ನಡಿಗರ ಹೆಮ್ಮೆಯ ಪ್ರತೀಕ.. ರಾಯಣ್ಣ ಅಭಿಮಾನಿ ಗಣೇಶ್ ಕೆ ದಾವಣಗೆರೆ.

Spread the love

ಸಂಗೊಳ್ಳಿ ರಾಯಣ್ಣ ಕನ್ನಡಿಗರ ಹೆಮ್ಮೆಯ ಪ್ರತೀಕ.. ರಾಯಣ್ಣ ಅಭಿಮಾನಿ ಗಣೇಶ್ ಕೆ ದಾವಣಗೆರೆ.

 

ನಿಮಗೆ ತಾಕತ್ತಿದ್ದರೆ ಪ್ರತಿಮೆ ತಿರುವುಗೊಳಿಸಿ ನೋಡಿ ಕನ್ನಡಿಗರ ಶಕ್ತಿ ಏನೆಂದು ತೋರಿಸುತ್ತೇವೆ ಇದು ನಮ್ಮ ನೇರ ಸವಾಲ್. ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು  ಬ್ಯಾಡರಹಳ್ಳಿ ಗ್ರಾಮ ದಲ್ಲಿ ಸೆಪ್ಟೆಂಬರ್ 24ರಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ  ಪ್ರತಿಮೆಯನ್ನು ಸ್ಥಳೀಯ ಯುವಕರು ಪ್ರತಿಷ್ಠಾಪನೆ ಮಾಡಿದ್ದಾರೆ. ಕೆ ಆರ್ ನಗರ ತಾಲೂಕಿನ MLA  ಸಾರ ಮಹೇಶ್ ಅವರು ರಾಯಣ್ಣ ಪ್ರತಿಮೆಯನ್ನು  ತೆರವುಗೊಳಿಸಿ ಎಂದು ಸರಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಬರುತ್ತಿದೆ., ಸಾರ ಮಹೇಶ್ ರವರಿಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅಲ್ಲಿ ಇಡಲು ತೊಂದರೆಯಾದರು ಏನು? ಅರ್ಥ ಆಗುತ್ತಿಲ್ಲ. ನಮ್ಮ ರಾಜಕಾರಣಿಗಳಿಗೆ ಈ ನಾಡಿನ ಮಹಾನ್ ಪುರುಷರನ್ನು ಯಾವ ರೀತಿ ಗೌರವಿಸಬೇಕು ಎಂಬುದರ ಬಗ್ಗೆ ಪಾಠ ಮಾಡುವ ಅನಿವಾರ್ಯತೆ ಇದೆ. ನಾವು ಈ ಮೂಲಕ ಸಾರಾ ಮಹೇಶ್ ರವರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ ಒಂದು ವೇಳೆ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಿದ್ದೆ ಆದರೆ ಕೆ ಆರ್ ನಗರದಲ್ಲಿ ಇನ್ನೆಂದು ಕಾಣದಂತ ಬೃಹತ್ ಹೋರಾಟಕ್ಕೆ ರಾಯಣ್ಣ ಅಭಿಮಾನಿಗಳು ಕರೆ ಕೊಡಬೇಕಾಗುತ್ತದೆ ಎಚ್ಚರಿಕೆ. ನಿಮಗೆ ತಾಕತ್ತಿದ್ದರೆ ಪ್ರತಿಮೆ ತಿರುವುಗೊಳಿಸಿ ನೋಡಿ ಕನ್ನಡಿಗರ ಶಕ್ತಿ ಏನೆಂದು ತೋರಿಸುತ್ತೇವೆ ಇದು ನಮ್ಮ ನೇರ ಸವಾಲ್.

ವರದಿ – ಉಪಳೇಶ ವಿ. ನಾರಿನಾಳ

Leave a Reply

Your email address will not be published. Required fields are marked *