ಮೋಹನ್ ಕುಮಾರ್ ರ ದೇಶಾಭಿಮಾನ ಚಟುವಟಿಕೆಗಳು ಯಶಸ್ಸು ಕಾಣಲಿ- ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.

Spread the love

ಮೋಹನ್ ಕುಮಾರ್ ದೇಶಾಭಿಮಾನ ಚಟುವಟಿಕೆಗಳು ಯಶಸ್ಸು ಕಾಣಲಿಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.

ಬೆಂಗಳೂರು: ನ 9, ವಿಧಾನ ಸೌಧದ ಕಚೇರಿಯಲ್ಲಿ ನವದೆಹಲಿಯಲ್ಲಿ ಮತದಾನ ಜಾಗೃತಿಗಾಗಿ ವಿನೂತನ ಮ್ಯಾರಥಾನ್ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿರವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿಸಿದರು! ಮೋಹನ್ ಕುಮಾರ್ ದಾನಪ್ಪ, ಕೇಂದ್ರ ಸರ್ಕಾರಿ ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಇವರು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರ 72ನೇ ಜನ್ಮದಿನದ ಸವಿನೆನಪಿಗಾಗಿ ‘ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ’ ಎಂಬ ಶೀರ್ಷಿಕೆಯಡಿ ನವದೆಹಲಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಮತದಾನ ಚಲಾವಣೆ ಮಾಡುವುದು ಅವರುಗಳ ಸಂವಿಧಾನ ಬದ್ಧ ಹಕ್ಕು ಮತ್ತು ಅದ್ಯ ಕರ್ತವ್ಯವಾದುದು ಎಂಬುವುದನ್ನು ಜಾಗೃತಿ ಮೂಡಿಸಿರುವುದು ಶ್ಲಾಘನೀಯ, ಇವರ ದೇಶಾಭಿಮಾನ ಚಟುವಟಿಕೆಗಳು ಯಶಸ್ಸನ್ನು ಕಾಣಲೆಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿರವರು ಮೋಹನ್ ಕುಮಾರ್ ದಾನಪ್ಪನವರ ಕಾರ್ಯವನ್ನ ಪ್ರಶಂಸಿಸಿ ಅಭಿನಂದನಾ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ!

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *