*ಆ.8ರಂದು ‘ಭರವಸೆ’ ರಾಜ್ಯಾದ್ಯಂತ ತೆರೆಗೆ *
ಹುಬ್ಬಳ್ಳಿ : ‘ಲೇಡೀಸ್ ಬಾರ್’ ಖ್ಯಾತಿಯ ,ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗಂಗೂರ ಗ್ರಾಮದ ಯುವ ನಿರ್ದೇಶಕ ಮುತ್ತು ಎ.ಎನ್. ರವರ ಮತ್ತೊಂದು ಚಿತ್ರ ‘ಭರವಸೆ’ ಆಗಸ್ಟ್ 8 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಈ ಚಿತ್ರವು ಆರ್. ಆರ್ ಮೂವ್ಹಿ ಮೇಕರ್ಸ್ ಬ್ಯಾನರ ಅಡಿಯಲ್ಲಿ ಮೊದಲ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರಕ್ಕೆ ಬಿ.ಸಿ.ನಾಗರಾಜು ಅವರು ಬಂಡವಾಳ ಹೂಡಿದ್ದಾರೆ ಎಂದು ಚಿತ್ರ ನಿರ್ದೇಶಕ ಮುತ್ತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಚಿತ್ರದಲ್ಲಿ 5 ಹಾಡುಗಳು ಇದ್ದು ಕನ್ನಡದ ಹೆಸರಾಂತ ಗಾಯಕರಾದ , ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್, ಅನುರಾಧ ಭಟ್ , ಸಮಿತಾ ಮಲ್ನಾಡ್, ಸುಪ್ರಿಯಾ ಲೋಹಿತ್ ಹಾಡಿದ್ದಾರೆ.
ಶೀರ್ಷಿಕೆ ತಕ್ಕಂತೆ ಕಥೆ ಇರುವುದು, ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನೋ ಒಂದು ಪಡೆದುಕೊಳ್ಳುವುದಕ್ಕೂ ಅಥವಾ ಇನ್ನೇನು ಸಾಧಿಸಬೇಕು ಅನ್ನೋ ಭರವಸೆಯಲ್ಲಿ ಬದುಕುತ್ತಾನೆ . ಅದೇ ರೀತಿ ಚಿತ್ರದ ನಾಯಕ ಪಡೆದುಕೊಳ್ಳುವುದನ್ನು ಕಳೆದುಕೊಳ್ಳುವುದು ಏನು?ಪ್ರೀತಿ-ದ್ವೇಷ- ವಿಶ್ವಾಸ ,ಸಾಧನೆ ಮತ್ತಿನ್ನೇನು ಎಂಬುವುದೇ ಚಿತ್ರಕಥೆಯ ಮುಖ್ಯ ಎಳೆಯಾಗಿದೆ. ಮುಖ್ಯ ಪಾತ್ರದಲ್ಲಿ, ವಿನಯ ರಾಜ್ , ಅಹಲ್ಯ ಸುರೇಶ್ , ನಾಗರಾಜ್ , ಅಮೃತ, ಕೆಂಪೇಗೌಡ, ಶೋಬರಾಜ್ , ಹೊನ್ನವಳ್ಳಿ ಕೃಷ್ಣ , ಕಿಲ್ಲರ್ ವೆಂಕಟೇಶ್ , ಹಾಗೂ ಮುಂತಾದವರು ನಟಿಸಿದ್ದಾರೆ ,ಚಿತ್ರಕ್ಕೆ ವೀನಸ್ ಮೂರ್ತಿ ಛಾಯಾಗ್ರಣವಿದ್ದು , ಸಂಕಲನ ಕುಮಾರ್ ಸಿ ಎಚ್, ಸಾಹಿತ್ಯ, ಶ್ರೀತೇಜ, ಅಭಿಜಿತ್ ತೀರ್ಥಳ್ಳಿ, ಬೈರೇಶ್ , ಸಂಗೀತ ಹರ್ಷ ಕೋಗೋಡ್ ,ಪತ್ರಿಕಾಸಂಪರ್ಕ ಆರ್.ಚಂದ್ರಶೇಖರ,ಡಾ.ವೀರೇಶ ಹಂಡಿಗಿ,ಡಾ.ಪ್ರಭು ಗಂಜಿಹಾಳ ಅವರದ್ದಿದೆ.ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಪ್ರೋತ್ಸಾಹ ನೀಡುವಂತೆ ನಿರ್ಮಾಪಕರು,ನಿರ್ದೇಶಕರು ಮನವಿ ಮಾಡಿದರು. ಗೋಷ್ಠಿಯಲ್ಲಿ ನಿರ್ಮಾಪಕ ನಾಗರಾಜ್ .ಬಿ.ಸಿ, ಕಲಾವಿದರಾದ ಸಂತೋಷ್, ಚನ್ನಬಸಪ್ಪ ಕಾಳೆ, ಸಿದ್ದಾರ್ಥ ಅಪ್ಪು ,ಮಲ್ಲಿಕಾ, ಪಿಆರ್ ಓ ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಇದ್ದರು. ** ಡಾ.ಪ್ರಭು ಗಂಜಿಹಾಳ.